ಪರಮಪೂಜ್ಯ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರ 50ನೇ ವರ್ಷದ ಜನ್ಮದಿನದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ.
ಸಮಾಜದ ಅಭಿವೃದ್ಧಿಗಾಗಿ ಸಮರ್ಪಿಸಿರುವ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಸಾಮಾಜಿಕ ಜವಾಬ್ದಾರಿಗಳೊಂದಿಗೆ ಸಾಗುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್ ಆರ್ ಮೋಹನ್ ನಾಗರಾಜ್ ನುಡಿದರು.
ಹೊಳಲ್ಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು. ಲಯನ್ಸ್ ಕ್ಲಬ್.ರೆಡ್ ಕ್ರಾಸ್ ಸಂಸ್ಥೆ. ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ, ಹಾಗೂ ದೃಷ್ಟಿ ಕಣ್ಣಿನ ಆಸ್ಪತ್ರೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಬಸವ ಮೂರ್ತಿ ಮಾದರ ಚೆನ್ನಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮುಖೇನಾ ಉದ್ಘಾಟಿಸಿ ಮಾತನಾಡುತ್ತಾ ಶ್ರೀಯುತರು ಹೊರರಾಜ್ಯಗಳಲ್ಲಿ ನಿರಂತರ ಪ್ರವಾಸ ಕೈಗೊಂಡು ಜಾತ್ಯತೀಯತೆ,ಅಸ್ಪೃಶ್ಯತೆ,ಮೂಡನಂಬಿಕೆ, ದುಶ್ಚಟಯುಕ್ತ ಸಮಾಜನಿರ್ಮಾಣ,ದೇವದಾಸಿ ಪದ್ಧತಿ ನಿರ್ಮೂಲನೆ,ಬಸವ ತತ್ವ ಪ್ರಚಾರ,ಕ್ರೀಡೆ,ಸಾಂಸ್ಕೃತಿಕ ಚಟುವಟಿಕೆ,ಪರಿಸರ,ಯುವಜನ ಸಬಲೀಕರಣ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲವಾಗಿ ದುಡಿಯುತ್ತಿದ್ದಾರೆ ಇಂಥವರ 50ನೇ ವರ್ಷದ ಹುಟ್ಟು ಹಬ್ಬದ ಆಚರಣೆ ಪ್ರತಿವರ್ಷದಂತೆ ಈ ಸಾರಿಯೂ ಸಹ ಬಡಸಾಮಾನ್ಯ ವಂಚಿತ ಸಮಾಜದ ಕುಟುಂಬಗಳು ಉಪಯೋಗವನ್ನು ಪಡೆದುಕೊಳ್ಳಲಿ ಎಂದು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಡಾ. ಎಚ್.ಜಿ.ಉಮಾಪತಿ ಮಾತನಾಡುತ್ತಾ ಶ್ರೀಯುತರು ಸಮ ಸಮಾಜದ ಕನಸು ಕಂಡು ಅದರ ಸಹಕಾರ ಮೂರ್ತಿಯಾಗಿ ಶ್ರಮಿಸುತ್ತಿದ್ದಾರೆ ಇಂಥ ಸಮಾಜಮುಖಿ ಗುರುಗಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನುಡಿದರು.
ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಂಚಾಲಕರಾದ ಡಾಕ್ಟರ್ ಸುಮಿತ್ರಕ್ಕರವರು ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಶಿವಮೂರ್ತಿ. ಪುರಸಭೆ ಉಪಾಧ್ಯಕ್ಷರಾದ ಕೆ.ಸಿ ರಮೇಶ್, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾದ ಗಿರೀಶ್. ಮಕ್ಕಳ ತಜ್ಞರಾದ ಡಾಕ್ಟರ್ ಮಂಜುನಾಥ್.ಸರ್ಕಾರಿ ನೌಕರರ ಸಂಘದ ಖಜಾಂಚಿಯಾದ ಆರ್ ಅಣ್ಣಪ್ಪ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಎಚ್ ಚಂದ್ರಶೇಖರ್ ನಾಯಕ್. ಆರೋಗ್ಯ ಇಲಾಖೆಯ ಸಂಘದ ಅಧ್ಯಕ್ಷರಾದ ಎನ್.ಪಿ.ರಂಗನಾಥ್, ನಿವೃತ್ತ ಮುಖ್ಯ ಶಿಕ್ಷಕರಾದ ಟಿ. ವರದರಾಜ, ಮೆಡಿಕಲ್ ಸ್ಟೋರಿನ ಮಲ್ಲಿಕಾರ್ಜುನ್. ರಾಮಗಿರಿ ರವಿ.ದೃಷ್ಟಿ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗ ಫಲಾನುಭವಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.ಶಿಬಿರದಲ್ಲಿ ಸುಮಾರು 150 ಫಲಾನುಭವಿಗಳು ಉಪಯೋಗ ಪಡೆದುಕೊಂಡರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030