ಸಾರಿಗೆ ಸಂಸ್ಥೆಯ ಸುಧಾರಣೆಗೆ ಮನವಿ ಮಾಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಸಾರಿಗೆ ಸಂಸ್ಥೆಯ ಸುಧಾರಣೆಗೆ ಮನವಿ ಮಾಡಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.

“ದೈವಸ್ಥರಿಗೆ ದೇವಾಲಯಗಳು ನಿರ್ಮಿಸಬೇಕು”

ಕರ್ನಾಟಕ ಘನ ಸರ್ಕಾರದ ಸನ್ಮಾನ್ಯರಾದ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀಯುತ ರಾಮಲಿಂಗಾರೆಡ್ಡಿ ಅವರು ಹೊಸಪೇಟೆಯಿಂದ ಬೆಂಗಳೂರುಗೆ ಹೊರಡುವ ಮಾರ್ಗ ಮಧ್ಯೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ .ಎನ್. ಟಿ. ಅವರು ಸಚಿವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಸಚಿವರು ಪಟ್ಟಣದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ತಮ್ಮ ಅವಧಿಯಲ್ಲಿ ಹೊಸದಾಗಿ ಬಂದಿರುವ 19 ಬಸ್ಸುಗಳನ್ನು ಉದ್ಘಾಟಿಸಿ ವೀಕ್ಷಣೆ ಮಾಡಿ ಪರಿಶೀಲಿಸಿದರು. ಬಳಿಕ ಸಚಿವರನ್ನು ತಮಟೆ, ಡೊಳ್ಳಿನ ನಾದದೊಂದಿಗೆ ಸಂಭ್ರಮದಿಂದ ಮೆರವಣಿಗೆ ಮೂಲಕ ಹೂವಿನ ಮಾಲೆಯನ್ನು ಅರ್ಪಿಸಿ ಜನ ಸಂಪರ್ಕ ಕಛೇರಿಗೆ ಕರೆತಂದರು.

ಶಾಸಕರು ಅಧ್ಯಕ್ಷತೆ ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ನನ್ನ ತಂದೆಯವರಾದ ಮಾಜಿ ಶಾಸಕರು ದಿ. ಎನ್. ಟಿ. ಬೊಮ್ಮಣ್ಣನವರು ಹಾಗೂ ಸಚಿವರ ( 1979-1994 ) ಮಧ್ಯೆ ಒಳ್ಳೆಯ ರಾಜಕೀಯ ನಂಟು ಇತ್ತು.‌ ಶ್ರೀಯುತರಾದ ರಾಮಲಿಂಗಾರೆಡ್ಡಿ ಅವರು ರಾಜಕಾರಣದಲ್ಲಿ ಶಿಸ್ತಿನ ಸಿಪಾಯಿಗಳು ಹಾಗೂ ಒಳ್ಳೆಯ ಹೆಸರನ್ನು ಮಾಡಿದ್ದಾರೆ. ನಾನು ರಾಜಕೀಯಕ್ಕೆ ಹೊಸಬ. ಆದರೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದರು.‌ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಸಾರಿಗೆ ಸಂಸ್ಥೆಯ ಕುಂದುಕೊರತೆಗಳು, ಅಭಿವೃದ್ಧಿಯಿಂದ ಆಗಬೇಕಾದ ಕೆಲಸ ಕಾರ್ಯಗಳು ಹಾಗೂ ಇಲ್ಲಿ ಹೆಚ್ಚಿನದಾಗಿ ದೈವ ಭಕ್ತರು ಇರುವುದರಿಂದ ದೇವಸ್ಥಾನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿಕೊಡಬೇಕು ಎಂದೂ ಪತ್ರದ ಮೂಲಕ ಸರ್ಕಾರಕ್ಕೆ ಕಳ ಕಳಿಯಿಂದ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿವಿಧ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend