ಬೆಳಗೊಡು ಹಾಳ್ ಗ್ರಾಮಕ್ಕೆ ಡೆಂಗ್ಯೂ ರೋಗವನ್ನು ಹೊತ್ತು ತರುತ್ತಿರುವ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ ಅಧಿಕಾರಿ ಪಿ.ಡಿ.ಓ ಶೀಲ್ಪಾರಾಣಿ…!!!

Listen to this article

ಬೆಳಗೊಡು ಹಾಳ್ ಗ್ರಾಮಕ್ಕೆ ಡೆಂಗ್ಯೂ ರೋಗವನ್ನು ಹೊತ್ತು ತರುತ್ತಿರುವ ನಂ.10 ಮುದ್ದಾಪುರ ಗ್ರಾಮ ಪಂಚಾಯಿತಿ ಅಧಿಕಾರಿ ಪಿ.ಡಿ.ಓ ಶೀಲ್ಪಾರಾಣಿ

ಬಳ್ಳಾರಿ ಕಂಪ್ಲಿ: ಕಂಪ್ಲಿ ತಾಲೂಕಿನ ನಂ .5 ಬೆಳಗೊಡು ಹಾಳ್ ಗ್ರಾಮದ ಬಾರಿಕರ ನಾಗೇಶಪ್ಪರವರ ಮನೆಯ ರೈತರ ಜಮೀನುಗಳಿಗೆ ಹೋಗುವ ರಸ್ತೆಯಲ್ಲಿ ಕೊಳಚೆ ನೀರು ನಿಂತು ಮಾರಕ ರೋಗಕ್ಕೆ ಆಹ್ವಾನ ನೀಡುತ್ತಿದೆ. ಇಡೀ ರಾಜ್ಯವೇ ಮಾರಕ ರೋಗವಾದ ಡೆಂಗ್ಯೂ ರೋಗವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೆ ಈ ಗ್ರಾಮದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಇಲ್ಲಿಯ ಸದಸ್ಯರು ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಜಾಹೀರಾತುಗಳಲ್ಲಿ ಡೆಂಗ್ಯೂ ಮಹಾಮಾರಿ ಬಗ್ಗೆ ದಿನ ಬೆಳಗಾದರೆ ನೋಡುತ್ತಲೇ ಇದ್ದೇವೆ. ಒಂದು ಸಣ್ಣ ಗ್ಲಾಸು, ನೀರಿನ ಟ್ಯಾಂಕರ್, ಬಿಂದಿಗೆ ಹೀಗೆ ಹಲವಾರು ಸಾಮಾನುಗಳಲ್ಲಿ ನೀರು ನಿಂತಿದ್ದರೆ ಅದನ್ನು ಖಾಲಿ ಮಾಡಿ ಡೆಂಗ್ಯೂ ರೋಗವನ್ನು ನಿಯಂತ್ರಣ ಮಾಡಿ ಎಂದು ಜಾಹೀರಾತು ನೀಡುತ್ತಿದ್ದಾರೆ.

ಆದರೆ ಇಲ್ಲಿಯ ವ್ಯವಸ್ಥೆ ಕೊಳಚೆ ನೀರು ನಿಂತು ಅದೇಷ್ಟೋ ಗಬ್ಬುನಾತ ಬರುತ್ತಿದ್ದರು ಸಹ ಇದರ ಸ್ವಚ್ಚತೆಗೆ ಯಾವೊಬ್ಬ ನಾಲಾಯಕ್ ಅಧಿಕಾರಿಯು

ಮುಂದಾಗುತ್ತಿಲ್ಲ. ಈ ಕೊಳಚೆ ನೀರು ನಿಂತಿರುವ ರಸ್ತೆಯ ಸುತ್ತಲೂ ಸಾಕಷ್ಟು ಮನೆಗಳಿದ್ದು ಇದರ ದುರ್ವಾಸನೆಯಿಂದಾಗಿ ಸುತ್ತ ಮುತ್ತಲಿನ ಮನೆ ಖಾಲಿ ಮಾಡುವ ಪರಿಸ್ಥಿತಿ ಬಂದು ನಿಂತಿದೆ. ಗ್ರಾಮ ಪಂಚಾಯಿತಿಯಿಂದ 100 ಮೀಟರ್ ಅಂತರದಲ್ಲಿ ಈ ರೀತಿ ವ್ಯವಸ್ಥೆ ಇದ್ದು ಇದನ್ನು ನೋಡಿದರೂ ಸಹ ಈ ಗ್ರಾಮ ಪಂಚಾಯಿತಿ ಪಿಡಿಒ ಶೀಲ್ಪಾರಾಣಿ ನೋಡಿ ಕೇಳಿದರು ಸಹ ಗೊತ್ತಿಲ್ಲದ ರೀತಿ ಇದ್ದಾರೆ. ಹಾಗೂ ಈ ಗ್ರಾಮ ಪಂಚಾಯಿತಿ ಸದಸ್ಯರುಗಳು ಸಹ ಇವನ ಚಾಳಿಯನ್ನೆ ಮುಂದುವರೆಸುತ್ತಿದ್ದಾರೆ. ಈ ಕೂಡಲೇ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈ ಊರಿನ ಕಡೆ ಗಮನ ಹರಿಸಿ ಜನರ ಆರೋಗ್ಯವನ್ನು ಕಾಪಾಡಬೇಕು…

ವರದಿ. ಬಸವರಾಜ್, ಬಡಗಿ ಕಂಪ್ಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend