ಬಸಯ್ಯ ಮೇಷ್ಟ್ರು ಶಿಕ್ಷಣದ ಆಸ್ತಿ; ಶಾಲೆ, ಕಾಲೇಜು ,ವಸತಿನಿಲಯಕ್ಕಾಗಿ ಸೂಟ್ – ಕೇಸ್ ತುಂಬಾ ಕಡತಗಳು ತುಂಬಿಕೊಂಡಿರುವೆ.- ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ಕ್ಷೇತ್ರದ ಪೂಜಾರಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಕೆ. ಬಸಯ್ಯ ಅವರ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದಿ.12-06-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್.ಟಿ. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಗ್ರಾಮದಿಂದ ಬಂದ ಶ್ರೀ ಬಸಯ್ಯ ಮೇಷ್ಟ್ರು ನಮ್ಮ ನಾಡಿನ ಜನತೆಯ ಜೀವನಕ್ಕೆ ಬೆಳಕಾಗಿದ್ದಾರೆ. ಅವರ ಅಭಿಮಾನಿಗಳು ಮತ್ತು ಶಿಷ್ಯರು ಇಲ್ಲಿ ಸೇರಿದ್ದು ಖುಷಿ ತಂದಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಸಯ್ಯ ಮೇಷ್ಟ್ರು ಅವರ ಸಲಹೆ ಪಡೆಯುವೆ.
ಶಾಲೆ, ಕಾಲೇಜು, ವಸತಿನಿಲಯಕ್ಕಾಗಿ ನನ್ನಲ್ಲಿಯೂ ನೂರಾರು ಯೋಜನೆಗಳು ಮತ್ತು ಕನಸುಗಳಿವೆ. ಅಧಿಕಾರಿಗಳು – ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಈಗಾಗಲೇ ಕಡತಗಳನ್ನು ಸಿದ್ದಪಡಿಸಿರುವೆ. ಅವುಗಳನ್ನು ನನ್ನ ಸೂಟ್ ಕೇಸ್ ತುಂಬಾ ತುಂಬಿಕೊಂಡಿರುವೆ. ಸರ್ಕಾರದ ಉನ್ನತ ಮಟ್ಟದಲ್ಲಿ ಮನವಿ ಸಲ್ಲಿಸಲು ಈ ದಿನ ಬೆಂಗಳೂರು ಕಡೆ ಹೊರಟಿರುವೆ ಎಂದೂ ಹೇಳಿದರು. ಈ ವೇಳೆ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಶ್ರೀ ಶಶಿಧರಸ್ವಾಮಿ, ಹೂಡೇಂ ಪಾಪನಾಯಕ, ಓಬಣ್ಣ ಜುಮ್ಮೋಬನಹಳ್ಳಿ, ಪೂಜಾರಹಳ್ಳಿ ಗ್ರಾ.ಪಂ. ಅಧ್ಯಕ್ಷರಾದ ವೆಂಕಟೇಶ, ಸರ್ವ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030