ಎಂ. ರವಿಚಂದ್ರ ಗುತ್ತೇದಾರರಿಂದ ಕಾರುಣ್ಯಾಶ್ರಮದಲ್ಲಿ ಅನ್ನ ಸಂತರ್ಪಣೆ —- ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಗಂಗಾವತಿಯ ಎಂ.ರವಿಚಂದ್ರ ಗುತ್ತೇದಾರರು ತಮ್ಮ ಜನ್ಮ ದಿನದ ಅಂಗವಾಗಿ ಆಶ್ರಮದಲ್ಲಿ ಅನ್ನ ಸಂತರ್ಪಣೆ ಮಾಡಿ ” ನಿಮ್ಮೊಂದಿಗೆ ನಾವಿದ್ದೇವೆ “ಎನ್ನುವ ಸಂದೇಶದೊಂದಿಗೆ ವಿನೂತನ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಮಯದಲ್ಲಿ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ನಮ್ಮ ಕಾರುಣ್ಯಾಶ್ರಮದ ನಿರಂತರ ಮಾರ್ಗದರ್ಶಕರು ಗಂಗಾವತಿ ತಾಲೂಕಿನಲ್ಲಿ ತೆರೆಯ ಹಿಂದೆ ಹಲವಾರು ಸಮಾಜ ಪರಕಾರಿಗಳನ್ನು ಮಾಡುತ್ತಾ ನೊಂದವರ ಬಾಳಿಕೆ ಬೆಳಕಾಗಿರುವ ಎಂ ರವಿಚಂದ್ರ ಗುತ್ತೇದಾರರ ಸಮಾಜಪರ ಕಾರ್ಯಗಳು ಸಮಾಜಕ್ಕೆ ಅಪಾರ ಕೊಡುಗೆ ಪ್ರತಿ ವರ್ಷವೂ ಕೂಡ ನಮ್ಮ ಕರುಣೆಯ ಕಾರುಣ್ಯ ಕುಟುಂಬದಲ್ಲಿ ಕರುಣೆಯ ಕಾರುಣ್ಯ ಮೂರ್ತಿಗಳಾಗಿ ತಮ್ಮ ಜನ್ಮದಿನ ಮತ್ತು ತಮ್ಮ ಸ್ನೇಹಿತರ ವಿಶೇಷ ಕಾರ್ಯಕ್ರಮಗಳನ್ನು ಕಾರುಣ್ಯಾಶ್ರಮದಲ್ಲಿ ನೆರವೇರಿಸುವ ಮೂಲಕ ಕಾರುಣ್ಯ ಕುಟುಂಬದ ಹಸಿವು ನೀಗಿಸುತ್ತಿದ್ದಾರೆ. ಇಂತಹ ಕರುಣಾಮಯಿಗಳಿಂದ ಕಾರುಣ್ಯ ಆಶ್ರಮದ ದೈನಂದಿನ ಬದುಕು ಸಾಗುತ್ತಿದೆ. ಇವರಿಗೆ ಭಗವಂತ ಐಶ್ವರ್ಯ ಸಿರಿ ಸಂಪತ್ತು ಆಯಸ್ಸು ಆಯುರಾರೋಗ್ಯ ಕರುಣಿಸೆಲೆನ್ನುವ ವಿಶೇಷ ಪ್ರಾರ್ಥನೆಯೊಂದಿಗೆ ಹಾರೈಸಲಾಗಿದೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉದಯ್ ಸಿಂಧನೂರು. ಆದಮ್ ಸಿಂಧನೂರು. ತನ್ವೀರ್ ಸಿಂಧನೂರು.ನಾಗರಾಜ. ರಾಜ್. ಕಾಶೀಮ್. ಆಲಂ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ. ಶರಣಮ್ಮ. ಸಿದ್ದಯ್ಯ ಸ್ವಾಮಿ. ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030