ನರೇಗಾ ಕಾರ್ಮಿಕರೊಂದಿಗೆ ವಿಶ್ವಪರಿಸರ ದಿನಾಚರಣೆ ಆಚರಿಸಿ ಪರಿಸರ ಜಾಗೃತಿ ಮೂಡಿಸಿದ ಶಾಸಕ – ಡಾ. ಶ್ರೀನಿವಾಸ್ ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ತನ್ನ ಹುಟ್ಟು ಊರು ನರಸಿಂಹಗಿರಿ ನಿಂಗವ್ವನಕಟ್ಟೆಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ದಿ. 05-06-24 ರಂದು ಭೇಟಿ ನೀಡಿ ನರೇಗಾ ಕಾರ್ಮಿಕರೊಂದಿಗೆ ಶ್ರಮದಾನ ಮಾಡಿ ಗಿಡ ನೆಟ್ಟು ವಿಶ್ವ ಪರಿಸರದ ದಿನಾಚರಣೆಯನ್ನು ಆಚರಿಸಿದರು. ತಮ್ಮ ಕ್ಷೇತ್ರದ ಪರಿಸರ ಸಂರಕ್ಷಣೆಗೆ ಪಣತೊಡಲು ಜಾಗೃತಿ ಮೂಡಿಸಿ ಸ್ಪೂರ್ತಿಯಾದರು. ಗ್ರಾಮ ಪಂಚಾಯತಿ ವತಿಯಿಂದ ತಮ್ಮ ದುಡಿಮೆಗೆ ತಕ್ಕ ಕೂಲಿಯನ್ನು ಕೊಡುತ್ತಿರುವುದನ್ನು ಮಾಹಿತಿ ಪಡೆದರು. ಹಾಗೆಯೇ ಕಾರ್ಮಿಕರ ಕಷ್ಟ ಸುಖ ವಿಚಾರಿಸಿ ನಮ್ಮ ಸರ್ಕಾರ ನಿಮ್ಮ ಪರ ಕೆಲಸ ಮಾಡಲು ಬದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030