ಆರೋಗ್ಯಕ್ಕಾಗಿ ನಾನು ಗ್ಯಾರಂಟಿ ; ಆರೋಗ್ಯದ ಒಳಿತಿಗಾಗಿ ಸದಾಕಾಲವೂ ಬಡವರ ಸೇವೆ ಮಾಡುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ದಿ.30-05-24 ರಂದು ಹೊಸಪೇಟೆಯ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ತಮ್ಮ ಕ್ಷೇತ್ರದ ಜನರಿಗಾಗಿ “ಆರೋಗ್ಯಕ್ಕಾಗಿ ನಾನು ಗ್ಯಾರಂಟಿ” ಎಂಬ ಕೊಟ್ಟ ಮಾತಿನಂತೆ ನಲವತ್ತಕ್ಕೂ ಹೆಚ್ಚಿನ ಜನರಿಗೆ ಉಚಿತ ಕಣ್ಣಿನ ನೇತ್ರಾ ಶಸ್ತ್ರ ಚಿಕಿತ್ಸೆ ನೆರವೇರಿಸಿ ಮಾನವೀಯತೆ ಮೆರೆದರು. ನಿತ್ಯ ನೂರಾರು ಸಮಸ್ಯೆಗಳು ಹೊತ್ತು ಬರುವರನ್ನು ವಿಚಾರಿಸಿ ಉನ್ನತ ಮಟ್ಟದಲ್ಲಿ ತೊಂದರೆಯಲ್ಲಿರುವವರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸಿ ಬಡವರ ಪ್ರೀತಿಗೆ ಪಾತ್ರರಾಗಿ ಕೂಡ್ಲಿಗಿ ಕ್ಷೇತ್ರದ ಜನರಲ್ಲಿ ಆತ್ಮ ವಿಶ್ವಾಸ ತಂದುಕೊಟ್ಟು ಹೊಸ ಸಂಚಲನ ಮೂಡಿಸಿದ್ದಾರೆ. ಕ್ಷೇತ್ರದ ವಿವಿಧ ಹಳ್ಳಿಗಳಾದ ಸೂಲದರಹಳ್ಳಿ, ಸುಂಕದಕಲ್ಲು , ಎಕ್ಕೆಗುಂದಿ, ಕುಪ್ಪಿನಕೆರೆ , ಜೂಮೋಬನಹಳ್ಳಿ, ಗುಣಸಾಗರ , ಯಂಬಳಿ- ವಡ್ಡರಹಟ್ಟಿ , ಚಂದ್ರಶೇಖರಪುರ , ಯರಲಿಂಗನಹಳ್ಳಿ , ಅಡವಿಸೂರನಹಳ್ಳಿ , ಕುರಿಹಟ್ಟಿ , ಇನ್ನೂ ಮುಂತಾದ ಊರಿನ ಜನರು ಉಚಿತ ನೇತ್ರಾ ಶಸ್ತ್ರಚಿಕಿತ್ಸೆ ಪಡೆದುಕೊಂಡು ಶಾಸಕರ ಕುರಿತು ಸಂತಸ ವ್ಯಕ್ತ ಪಡಿಸಿ ಶುಭ ಹಾರೈಸಿದರು….
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030