ಪ್ರತಿಯೊಬ್ಬ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕು. ಸಿದ್ದು ಹೂಗಾರ…!!!

Listen to this article

ಪ್ರತಿಯೊಬ್ಬ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕು —- ಸಿದ್ದು ಹೂಗಾರ —- ಸಿಂಧನೂರು ಗ್ರಾಮೀಣ ಮಂಡಲದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ನೆಕ್ಕಂಟಿ ವಂಶಿಕೃಷ್ಣ ಅವರ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಮಯದಲ್ಲಿ ಆಶ್ರಮದ ವತಿಯಿಂದ ನೆಕ್ಕಂಟಿ ವಂಶಿಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಿ.ಜೆ.ಪಿ.ಯ ಯುವ ಮುಖಂಡರಾದ ಸಿದ್ದು ಹೂಗಾರ ಮಾದನಾಡಿ ಪ್ರತಿಯೊಬ್ಬ ಯುವಕರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮ ದೇಶದ ಭ್ರಷ್ಟಾಚಾರ ಹಾಗೂ ಅನ್ಯಾಯ ತಡೆಗಟ್ಟುವ ನಿಟ್ಟಿನಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಿಜೆಪಿ ಗ್ರಾಮೀಣ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ನೆಕ್ಕಂಟಿ ವಂಶಿಕೃಷ್ಣ ಕೆರೆಯ ಹಿಂದೆ ಬೆಳಕಿಗೆ ಬರದೆ ಹಲವಾರು ಸಮಾಜಪರ ಕಾರ್ಯಗಳನ್ನು ಮಾಡುತ್ತ ಮುನ್ನಡೆಯುತ್ತಿದ್ದಾರೆ.

ಈಗಿನ ಕಾಲಮಾನದಲ್ಲಿ ಯುವಕರು ವಿಭಿನ್ನ ರೀತಿಯಲ್ಲಿ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವಂತಹ ಅದೆಷ್ಟೋ ಕಾರ್ಯಕ್ರಮಗಳನ್ನು ನಾವು ನೋಡಿದ್ದೇವೆ. ಆದರೆ ಕಾರುಣ್ಯದಂತಹ ಪವಿತ್ರ ದೇವಾಲಯದಲ್ಲಿ ಇಲ್ಲಿರುವ ಎಲ್ಲ ಗುರು ಹಿರಿಯರ ಹಾಗೂ ಸಹೋದರ ಸಹೋದರಿಯರ ಜೊತೆ ತಮ್ಮ ಹುಟ್ಟುಹಬ್ಬ ಇವರ ಹೆತ್ತವರ ಹಿರಿಮೆಯನ್ನು ಹೆಚ್ಚಿಸಿದೆ. ನಾವು ಹಾಗೂ ನಮ್ಮ ಸ್ನೇಹ ಬಳಗ ಮತ್ತು ನಮ್ಮ ಬಿಜೆಪಿ ಪಕ್ಷದ ಎಲ್ಲಾ ಯುವ ಮಿತ್ರರು ಕಾರುಣ್ಯ ಆಶ್ರಮದ ಸೇವೆಗೆ ಸದಾವಕಾಲ ಸಿದ್ದರಿರುತ್ತೇವೆ. ಈ ಆಶ್ರಮದ ನೂತನ ಕಟ್ಟಡಕ್ಕಾಗಿ ನೆಕ್ಕಂಟಿ ವಂಶಿಕೃಷ್ಣ ಅವರ ಸೇವೆ ಶ್ಲಾಘನೀಯವಾಗಿದೆ. ಎಂದು ಭಾವನಾತ್ಮಕವಾಗಿ ಮಾತನಾಡಿ ನೆಕ್ಕಂಟಿ ವಂಶಿಕೃಷ್ಣ ಅವರಿಗೆ ಶುಭ ಕೋರಿದರು. ನಂತರ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಕಾರುಣ್ಯದ ಕಟ್ಟಡದ ಸಮಯದಲ್ಲಿ ನಕ್ಕಂಟಿ ವಂಶಿಕೃಷ್ಣ ಅವರು ಸಿಮೆಂಟ್ ವಿತರಿಸಿ ಮಾನವತೆ ಮೆರೆದರು. ಕಾರುಣ್ಯ ಆಶ್ರಮದ ಎಲ್ಲಾ ಕಷ್ಟಗಳಲ್ಲಿ ಭಾಗಿಯಾಗಿ ಒಬ್ಬ ಸಹೋದರರು ಸ್ನೇಹಿತರಾಗಿ ನಮ್ಮೊಂದಿಗೆ ಇಲ್ಲಿರುವ ಎಲ್ಲಾ ಆಶ್ರಯದಾತರುಗಳೊಂದಿಗೆ ಅವಿನಾಭಾವ ಹೊಂದಿ ಸಾಮಾಜಿಕ ಕಳಕಳಿಗೆ ಪಾತ್ರರಾಗಿದ್ದಾರೆ ಎಂದು ಮಾತನಾಡಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರೀಶ್ ಚೌದರಿ. ಭಾಸ್ಕರ್ ಲಕ್ಷ್ಮಣ. ದೇವಣ್ಣ ದೇವರಮನಿ ಗ್ರಾ.ಪಂ. ಸದಸ್ಯರು ಹರೇಟನೂರು. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಹಿರೇಮಠ. ಶರಣಮ್ಮ.ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು..

ವರದಿ.. ಲಿಂಗರಾಜ್ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend