ಕೂಡ್ಲಿಗಿ:ಸಮರ್ಪಕ ಬಸ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳ ಒತ್ತಾಯ…!!!

Listen to this article

ಕೂಡ್ಲಿಗಿ:ಸಮರ್ಪಕ ಬಸ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳ ಒತ್ತಾಯ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಘಟಕದಿಂದ. ಗ್ರಾಮೀಣ ಭಾಗಗಳಿಗೆ ಹಾಗೂ ಬಹುತೇಕ ವಿದ್ಯಾಭ್ಯಾಸಕ್ಕಾಗಿ ತೆರಳುವ ಮಾರ್ಗಕ್ಕೆ,ಸಮಯಕ್ಕೆ ಸರಿಯಾಗಿ ಸಂಪರ್ಕ ಕಲ್ಪಿಸುವಂತೆ ವಿದ್ಯಾರ್ಥಿಗಳು ಘಟಕದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಕೆಲ ಹೋರಾಟಗಾರರಾದ ಹೆಚ್.ವೀರಣ್ಣ ಹಾಗೂ ಮರಬನಳ್ಳಿ ಕರಿಯಪ್ಪ ನೇತೃತ್ವದಲ್ಲಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಭಾಗಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅಧಿಕಾರಿಗಳ ಘಟಕ ಅಧಿಕಾರಿಗಳ ಕಚೇರಿಗೆ ದಿಡೀರ್ ಮತ್ತಿಗೆ ಹಾಕಿ ಒತ್ತಾಯಿಸಿದ್ದಾರೆ.

ಕೂಡ್ಲಿಗಿ ಯಿಂದ ಕೊಟ್ಟೂರು ಮಾರ್ಗದ ಬಸ್ ಗಳನ್ನು ನೂರಾರು ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ, ಕಾರಣ ಪ್ರತಿದಿನಾಲು ಬೆಳಿಗ್ಗೆ 8ರಿಂದ10ಗಂಟೆ ಒಳಗೆ ಘಟಕದಿಂದ ಹೊರಡುವಂತೆ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆರೆದ ನೂರಾರು ವಿದ್ಯಾರ್ಥಿಗಳು ಸಾರ್ವಜನಿಕರು ಹೋರಾಟಗಾರರು , ಘಟಕದ ಅಧಿಕಾರಿಗಳಲ್ಲಿ ಕೋರಿದ್ದಾರೆ. ಕೂಡ್ಲಿಗಿ ಕೊಟ್ಟೂರು ಹರಪನಹಳ್ಳಿ ಮಾರ್ಗ ಸೇರಿದಂತೆ, ತಾಲೂಕಿನ ಗ್ರಾಮೀಣ ಭಾಗಗಳಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗೋ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ವಿದ್ಯಾರ್ಥಿಗಳು ಕೋರಿದರು. ಘಟಕ ವ್ಯವಸ್ಥಾಪಕರು ವಿದ್ಯಾರ್ಥಿಗಳ ಅಹವಾಲಿಗೆ ಶೀಘ್ರವೇ ಸ್ಪಂದಿಸುವ ಭರವಸೆ ನೀಡಿದರು, ತದನಂತರ ವಿದ್ಯಾರ್ಥಿಗಳು ಹೋರಾಟಗಾರರು ಘಟಕ ಅಧಿಕಾರಿ ಕಚೇರಿಯಿಂದ ಬಸ್ ನಿಲ್ದಾಣದತ್ತ ನಡೆದರು.

✍️ ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend