ತೆಗ್ಗಿನಮಠ ಶಾಲೆಗೆ ಹೋಗುವ ದಾರಿಯಲ್ಲಿ ಹಳ್ಳ ತೊಡಿ ತೊಂದರೆ ಮಾಡಿದ ಭೂಪರು.
ಮಹಾಲಿಂಗಪುರ ಪಟ್ಟಣ ಕೆಂಗೇರಿ ಮಡ್ಡಿಯ ಹತ್ತಿರದ ಬೆಳಗಲಿ ವ್ಯಪ್ತಿಯ ಓಂ ಬಸವ ಶಿಕ್ಷಣ ಸಂಸ್ಥೆಯ ಜ್ಞಾನ ಗುರುಕುಲ ಶಾಲೆಗೆ ಕೆಲವರ ಕಣ್ಣು ಬಿದ್ದು ಮಕ್ಕಳ ಶಿಕ್ಷಣಕ್ಕೆ ಅಡೆತಡೆಯನ್ನುಂಟು ಮಾಡಿ ಶಾಲೆಯ ಹೆಸರು ಕೆಡಿಸಲು ಹನ್ನಾರ ಮಾಡುತ್ತಿರುವ ಸ್ಥಳೀಯ ಪುರಸಭೆ ಮತ್ತು ಶಾಸಕ ಸಿದ್ದು ಸವದಿ ಎಂದು ಆರೋಪಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುರಗಯ್ಯ ತೆಗ್ಗನಮಠ. ಕಾರಣ ಶಾಲೆಯಲ್ಲಿ ಬಾಲಕಿಯೊಬ್ಬಳ ಶಾಲಾ ಶುಲ್ಕ ಉಳಿದಿದ್ದು ಅದನ್ನು ಭರನಾ ಮಾಡಲು ಶಿಕ್ಷಕರು ತಿಳಿಸಿದ್ದಾರೆ ಆದರೆ ಬಾಲಕಿಯ ತಂದೆ ಅದೆ ಶಾಲೆಯಲ್ಲಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸಿ ಈಗ ಅದರಿಂದ ಹೋರಗಡೆ ಬಂದಿದ್ದಾರೆ.
ಬಾಲಕಿಯು ಬೇರೆಡೆಗೆ ವರ್ಗಾವಣೆ ಹೊಂದಲು ವರ್ಗಾವಣೆ ಪತ್ರದ ಅವಶ್ಯಕತೆ ಇದೆ ಆದರೆ ಬಾಲಕಿಯ ವರ್ಗಾವಣೆ ಪತ್ರ ಶಾಲೆಯಲ್ಲಿಯೆ ಉಳಿದಿದ್ದು ಇದಕ್ಕಾಗಿ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರೆ ಮನವಿ ಮಾಡಿದರು ಪತ್ರ ಕೋಡಲು ಒಪ್ಪದ ಆಡಳಿತ ಮಂಡಳಿಯವರ ನಡೆಗೆ ಉದ್ದೇಶ ಪೂರ್ವಕವಾಗಿ ಶಾಲೆಗೆ ಹೇಗಾದರೂ ಮಾಡಿ ತೊಂದರೆಗಳನ್ನು ಉಂಟುಮಾಡವ ಸಲುವಾಗಿ ಶಾಸಕರು ಮತ್ತು ಪುರಸಭೆ ಅಧಿಕಾರಿಗಳು ಕೆಲವು ಸದಸ್ಯರ ಕುಮ್ಮಿಕ್ಕಿನಿಂದ ಶನಿವಾರ ಬೆಳ್ಳಂಬೆಳ್ಲಗ್ಗೆ ಜೆಸಿಬಿ ಮುಖಾಂತರ ಶಾಲೆಗೆ ಹೋಗುವ ರಸ್ತೆಯನ್ನು ಹಡ್ಡಿ ಹಳ್ಳ ತೆಗೆದು ಶಾಲಾ ಮಕ್ಕಳಿಗೆ ಸಂಪರ್ಕ ಬಂದ್ ಮಾಡಿ ಒಂದು ದಿನದ ಅವರ ಶಿಕ್ಷಣ ಹಾಳು ಮಾಡಿದ್ದಾರೆ ಎಂದು ಆರೋಪಿಸಿ ಮುರಗಯ್ಯ ತೆಗ್ಗನಮಠ ಹೇಳಿದರು.
ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030