ಹೊಳಲ್ಕೆರೆ. ಹೊಳಲ್ಕೆರೆ ಹೊಸದುರ್ಗ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಪಾಲಕರು ನಿಲಯ ಮೇಲ್ವಿಚಾರಕರು ಕಛೇರಿಯ ಸಿಬಂದಿಗಳಿಗೆ ಹೊಳಲ್ಕೆರೆ ಪಟ್ಟಣದ ಡಿ ದೇವರಾಜು ಅರಸು ಭವನದಲ್ಲಿ ಸೋಮವಾರ ಮಾಹಿತಿ ಹಕ್ಕು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಮಟ್ಟದ ಮಾಹಿತಿ ಹಕ್ಕು ಸಂಪನ್ಮೂಲ ವಕ್ತಿಯಾದ ವಾಗೀಶ್ ಮಾತನಾಡಿ ಮಾಹಿತಿ ಹಕ್ಕಿನ ಬಗ್ಗೆ ಸಂಪೂರ್ಣ ವಾಗಿ ಮಾಹಿತಿ ನೀಡಿದರು. ಇದರ ಜೊತೆಗೆ ಹಾಸ್ಟೆಲ್ ಗಳಲ್ಲಿ ಸ್ವಚ್ಚತೆ ಯಿಂದ ಇಟ್ಟುಕೊಳ್ಳಿ ವಿದ್ಯಾರ್ಥಿಗಳಿಗೆ ಯೋಗ ದ್ಯಾನ ಮಾಡಿಸಿ ಪುಸ್ತಕಗಳು ಪತ್ರಿಕೆಗಳನ್ನು ಓದುವ ಅವ್ಯಾಸವನ್ನು ರೂಡಿ ಮಾಡಿಸಿ ತಿಂಗಳ ಖರ್ಚು ವೆಚ್ಚಗಳನ್ನು ಸರಿಯಾಗಿ ಸಿದ್ದಪಡಿಸಿಟ್ಟುಕೊಳ್ಳಿ ಎಂದು ನಿಲಯ ಪಾಲಕರಿಗೆ ಸಲಹೆ ನೀಡಿ ಮಾಹಿತಿ ಹಕ್ಕು ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ಕಲ್ಯಾಣ ಅಧಿಕಾರಿಗಳಾದ ಪ್ರದೀಪ್ ಕುಮಾರ್, ಕಛೇರಿಯ ಎಲ್ಲ ಸಿಬ್ಬಂದಿಗಳು ನಿಲಯ ಪಾಲಕರು ಕಾರ್ಯಗಾರದಲ್ಲಿ ಭಾಗಿಯಾಗಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030