ಹೊಳಲ್ಕೆರೆ ತಾಲ್ಲೂಕು ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿಯ ಲೋಕದೊಳಲು ಗ್ರಾಮದಲ್ಲಿ ಗ್ರಾಮಸಭೆ ಕಾರ್ಯಕ್ರಮ ನಡೆಯಿತು…!!!

Listen to this article

ಹೊಳಲ್ಕೆರೆ ತಾಲ್ಲೂಕು ವಿಶ್ವನಾಥನಹಳ್ಳಿ ಗ್ರಾಮ ಪಂಚಾಯಿತಿಯ ಲೋಕದೊಳಲು ಗ್ರಾಮದಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು 15 ನೇ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯು ನಡೆಯಿತು. ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಕೆ ಸಿ ಉಷಾದೇವಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶಗಳು- 1)ಬೇಡಿಕೆಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತೀ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆ ಇಲ್ಲದಂತೆ ಉದ್ಯೋಗ ಒದಗಿಸುವ ಮೂಲಕ ಉತ್ಪಾದನಾ ಶೀಲ ಆಸ್ತಿಗಳನ್ನು ಸೃಜಿಸುವುದು, 2)ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವುದು,3)ಸ್ವಯಂ ಪ್ರೇರಿತವಾಗಿ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವುದು, 4)ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸುವುದು, ಹಕ್ಕುಗಳಾದ ಉದ್ಯೋಗ ಚೀಟಿ ಪಡೆಯುವ ಹಕ್ಕು,ಐದು ಕಿ, ಮೀ, ವ್ಯಾಪ್ತಿಯ ಒಳಗಡೆ ಉದ್ಯೋಗ ಪಡೆಯುವ ಹಕ್ಕು,ಕಾಮಗಾರಿ ಸ್ಥಳದಲ್ಲಿ ಅಪಘಾತವಾದರೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ಪಡೆದುಕೊಳ್ಳುವುದು, ಈ ಯೋಜನೆಯಡಿ ಹೊಸದಾಗಿ ಕೂಸಿನ ಮನೆ ನಿರ್ಮಾಣ ಬಂದಿದೆ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಪೌಷ್ಟಿಕ ಆಹಾರ,ಶುದ್ಧ ನೀರು,ಆಟದ ಪರಿಕರ ಒದಗಿಸುವುದಾಗಿದೆ, ಈ ಯೋಜನೆಯಡಿ 4 ಮುಖ್ಯ ಪ್ರವರ್ಗಗಳಡಿ 260 ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ, ಹಾಗೂ 15ನೇ ಹಣಕಾಸು ಆಯೋಗದ ಉದ್ದೇಶಗಳ ಕುರಿತು ವಿವರವಾಗಿ ಸಾರ್ವಜನಿಕರಿಗೆ ತಿಳಿಸಿದರು, ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ರವರು ವಯಿಸಿದ್ದರು, ಈ ಸಭೆಯಲ್ಲಿ ಅಧ್ಯಕ್ಷರು – ಮಂಜುನಾಥ್, ಪಿ,ಡಿ,ಓ,-ಮುರಳಿ,ಉಪಾಧ್ಯಕ್ಷರಾದಚಂದ್ರಮ್ಮಮೀನಾಕ್ಷಮ್ಮ, ತಿಮ್ಮೇಶ್, ರಾಜಶೇಖರ್,ರಾಘವೇಂದ್ರ,ಆಶಾ,ಗ್ರಾಮಸ್ಥರು ಪಾಲ್ಗೊಂಡಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend