ನೇಣಿಗೆ ಶರಣಾದ ವಿವಾಹಿತ ಪ್ರೇಮಿಗಳು
ಹೊಳಲು: ವಿವಾಹಿತ ಪ್ರೇಮಿಗಳಿಬ್ಬರು ನೆಣಿಗೆ ಶರಣಾದ ಘಟನೆ ಗುರುವಾರ ರಾತ್ರಿ ಹೂವಿನಹಡಗಲಿ ತಾಲೂಕು ಸುಕ್ಷೇತ್ರ ಮೈಲಾರದಲ್ಲಿ ನಡೆದಿದೆ.
ರಾಮನಗರ ತಾಲೂಕು ಕಾವೇರಿ ದೊಡ್ಡಿಯವರಾದ ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರೂ ಕೂಡಾ ಅನೈತಿಕ ಸಂಬಂಧ ಹೊಂದಿದ್ದರು. ಮೃತ ಪುರುಷ ರಮೇಶ ತಂದೆ ದೊಡ್ಡಮಲ್ಲಯ್ಯ 34ವರ್ಷ, ಮಹಿಳೆ ಪದ್ಮ ಗಂಡ ವೆಂಕಟರಮಣ 34ವರ್ಷ ಎಂಬ ಇವರು ಬೆಸ್ತ ಜನಾಂಗಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.
ಅ.9ರ ಬುಧವಾರ ಮದ್ಯಾಹ್ನ ಸ್ವಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸಿ ಬೈಕನ್ನು ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಂದ ಸಾರಿಗೆ ಬಸ್ನಲ್ಲಿ ಪ್ರಯಾಣ ಬೆಳಸಿ ಗುರುವಾರ ಸುಕ್ಷೇತ್ರ ಮೈಲಾರಕ್ಕೆ ಬಂದಿದ್ದಾರೆ.
ಬೆಳಿಗ್ಗೆ ಮೈಲಾರದಲ್ಲಿ ಬಟ್ಟೆ ಖರೀದಿಸಿ ನಂತರ ದೇವರ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸಿ ಸಂಜೆಯವರೆಗೂ ಸುಕ್ಷೇತ್ರದೆಲ್ಲೆಡೆ ಹಾಗೂ ನದಿಯ ತೀರದಲ್ಲಿ ಓಡಾಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ನಂತರ ಗುರುವಾರ ತಡರಾತ್ರಿ ಇವರಿಬ್ಬರು ನದಿ ತೀರದಲ್ಲಿರುವ ಮರದ ಕೊಂಬೆಗೆ ಒಂದೆ ಹಗ್ಗದಲ್ಲಿ ನೇಣು ಬಿಗಿದುಕೊಂಡಿದ್ದಾರೆ.
ಮೃತ ರಮೇಶನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತ ಪದ್ಮಳಿಗೆ ಒಂದು ಗಂಡು ಒಂದು ಹೆಣ್ಣು ಮಗು ಇದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಹಿರೇಹಡಗಲಿ ಪಿ.ಎಸ್.ಐ ಭರತ ಪ್ರಕಾಶ, ಎ.ಎಸ್.ಐ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಸಿಬ್ಬಂದಿ ಬೇಟಿ ನೀಡಿ ಮಹಿತಿ ಕಲೆಹಾಕಿ ದೂರು ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಕಲೆಹಾಕುವಲ್ಲಿ ಪೋಲೀಸರು ಯಶಸ್ವಿ
ಮೊದಲು ಅನಾಮದೇಯ ಮೃತ ದೇಹದಬಗ್ಗೆ ಮಾಹಿತಿ ಕಲೆಹಾಕಲು ಬೆನ್ನುಬಿದ್ದ ಪೊಲೀಸರಿಗೆ ಮೃತ ರಮೇಶನ ಜೇಬಿನಲ್ಲಿ ದೇವಸ್ಥಾನದ ದರ್ಶನ ಪಡೆದ 2ರೂ ಚೀಟಿ ಮಾತ್ರ ದೊರಕಿತು, ಇದರಿಂದ ಯಾವ ಮಾಹಿತಿ ಸಿಗಲಿಲ್ಲ. ರಾತ್ರಿಯಲ್ಲಾ ಮಳೆ ಸುರಿದ ಕಾರಣ ರಮೇಶನ ಜೇಬಿನಲ್ಲಿದ್ದ ಪೋನ್ ಕೂಡಾ ನೆಂದು ಸ್ವಿಚ್ಆಫ್ ಆಗಿತ್ತು. ನಂತರ ಮೃತನ ಸಿಮ್ ತೆಗೆದು ಬೇರೆ ಮೊಬೈಲ್ ಹಾಕಿ ನಂಬರ್ ತೆಗೆದು ಆ ನಂಬರ್ ಟ್ರೇಸ್ ಮಾಡಿದ ಪೊಲೀಸರು ಸಂಪೂರ್ಣ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾದರು…
ವರದಿ.ಮ್ಯಾಗೇರಿ ಸಂತೋಷ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030