ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಿ ಬಿ ಇ ಒ ಮಹೇಶ್ ವಿ ಪೂಜಾರ…!!!

Listen to this article

ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಿ
ಬಿ ಇ ಒ ಮಹೇಶ್ ವಿ ಪೂಜಾರ

ಕನ್ನಡ ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ

ಹೂವಿನ ಹಡಗಲಿ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಈಗಿನಿಂದಲೇ ಸೂಕ್ತ ಸಿದ್ಧತೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಮಂಗಳವಾರ
ಜಿಲ್ಲಾ ಪಂಚಾಯತ್ ವಿಜಯನಗರ ತಾಲೂಕು ಪಂಚಾಯಿತಿ ಹೂವಿನ ಹಡಗಲಿ
ಶಾಲಾ ಶಿಕ್ಷಣ ಇಲಾಖೆ ತುಂಗಭದ್ರಾ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಕನ್ನಡ ಗಣಿತ ವಿಷಯ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ವಿಷಯದಲ್ಲಿ ವ್ಯಾಕರಣದ ಅಂಶಗಳನ್ನು ಸುಲಭವಾಗಿ ಅರ್ಥವಾಗುವಂತೆ ಸರಳವಾಗಿ ಬೋಧಿಸಿರಿ. ಪ್ರಬಂಧ ಪತ್ರ ಬರಹ ಸೇರಿದಂತೆ ಖಚಿತವಾಗಿ ಪ್ರಶ್ನೆ ಕೇಳುವ ಪಾಠ ಪದ್ಯಗಳಿಗೆ ಆದ್ಯತೆ ನೀಡುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿರಿ ಎಂದು ತಿಳಿಸಿದರು.

ಗಣಿತ ವಿಷಯದಲ್ಲಿ ಒಂದು ಎರಡು ಅಂಕಗಳು ಬರುವ ಸುಲಭ ಘಟಕಗಳು, ಪ್ರಮೇಯ ಒಳಗೊಂಡಂತೆ ಪಾಸಾಗಲು ಅಂಕಗಳನ್ನು ಪಡೆಯುವ ಹಾಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಸತತ ಗೈರು ಹಾಜರಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪ್ರಗತಿಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಕನ್ನಡ ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ಈರಪ್ಪ ಮಹಾಲಿಂಗಪುರ, ಶಿವಪ್ಪ ಕೊಳ್ಳೇಗಾಲ ಹಾಗೂ ಗಣಿತ ವಿಷಯ ಕುರಿತು ಶಿವಬಸವ ಸ್ವಾಮಿ ಹಿರೇಮಠ, ಸತೀಶ್ ಮಾರ್ಗದರ್ಶನ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಮಾತನಾಡಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್ ಮಲ್ಲಿಕಾರ್ಜುನ, ಮುಖ್ಯ ಗುರುಗಳಾದ ಸುರೇಶ ಅಂಗಡಿ,
ಇತರರು ಉಪಸ್ಥಿತರಿದ್ದರು.

ಗಣಿತ ವಿಷಯ ವೇದಿಕೆಯ ಕೋರಿ ವಿಶ್ವನಾಥ್, ಸಹ ಶಿಕ್ಷಕರ ಸಂಘದ ಖಜಾಂಚಿ ಬಸವರಾಜ ಕೆ,ರೇಣುಕಾ ಸರಾಫ್ ನಿರ್ವಹಿಸಿದರು.

ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಕನ್ನಡ ಗಣಿತ ವಿಷಯ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು…

ವರದಿ. ಸಂತೋಷ ಮ್ಯಾಗೇರಿ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend