ದಲಿತರ ಬೇಡಿಕೆಗೆ ಸ್ಪಂದಿಸಿದ ಶಾಸಕ ಕೃಷ್ಣ ನಾಯ್ಕ…!!!

Listen to this article

ದಲಿತರ ಬೇಡಿಕೆಗೆ ಸ್ಪಂದಿಸಿದ ಶಾಸಕ ಕೃಷ್ಣ ನಾಯ್ಕ
ಹೂವಿನ ಹಡಗಲಿ ಕ್ಷೇತ್ರವಾದ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಗ್ರಾಮದ ಡಾ!! ಬಿ ಆರ್ ಅಂಬೇಡ್ಕರ್ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷರಾದ ಟಿ ಅಮರೇಶ್ ಅವರು ಮತ್ತು ಸಂಘಟನೆಯ ಸದಸ್ಯರು ಹಾಗೂ ದಲಿತ ಮುಖಂಡರು . ಸನ್ಮಾನ್ಯ ಶ್ರೀ ಕೃಷ್ಣ ನಾಯ್ಕ ಜನಪ್ರಿಯ ಶಾಸಕರು ಇವರಿಗೆ ವಿವಿಧ ಬೇಡಿಕೆಯನ್ನು ಸಲ್ಲಿಸಿದರು.
ಹೊಸ ಅಂಗನವಾಡಿ ಕೇಂದ್ರ ಮಂಜೂರು ಮಾಡುವ ಬಗ್ಗೆ ಸೊನ್ನ ಗ್ರಾಮದಲ್ಲಿ ಜನಸಂಖ್ಯೆ ಬಹಳ ಇರುವುದರಿಂದ ಹೆಚ್ಚುವರಿ ಯಾಗಿ ಹೊಸ ಅಂಗನವಾಡಿ ಕೇಂದ್ರ ಸ್ಥಾಪಿಸಿ ಕೊಡಬೇಕೆಂದು ಈ ಮೂಲಕ ಮನವಿ ಮಾಡಿದರು
ಡಾ!!ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು ಸುಮಾರು 20 ವರ್ಷದಿಂದ ಮಾದಿಗ ಜನಾಂಗ ಡಾ. ಬಿಆರ್ ಅಂಬೇಡ್ಕರ್ ಭವನ ನಿರ್ಮಿಸಿ ಕೊಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಮಾಜಿ ಶಾಸಕರು ಬೇಡಿಕೆಗೆ ಯಾವುದೇ ರೀತಿ ಸ್ಪಂದಿಸದೆ ಇದ್ದರು. ಆದರೆ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಕೃಷ್ಣ ನಾಯ್ಕ ಇವರು ನಮ್ಮ ಬೇಡಿಕೆಯನ್ನು ಸ್ಪಂದಿಸಿ ಆದಷ್ಟು ಬೇಗ ನಿಮಗೊಂದು ಭವನ ನಿರ್ಮಿಸಿ ಕೊಡುತ್ತೇನೆ ಎಂದು ತಿಳಿಸಿದರು.
ಡಾಕ್ಟರ್ ಬಿಆರ್ ಅಂಬೇಡ್ಕರ್ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಟಿ ಅಮರೇಶ್ ಮಾತನಾಡಿ ಅಂಬೇಡ್ಕರ್ ಭವನ ನಿರ್ಮಿಸಿದರೆ ದಲಿತರ ಮಕ್ಕಳು ಓದಿಕೊಳ್ಳುವುದಕ್ಕೆ ಸ್ಥಳ ಸಿಗುತ್ತೆ. ಕಾಲೋನಿಯ ಜನರಿಗೆ ಸಣ್ಣಪುಟ್ಟ ಕಾರ್ಯಕ್ರಮ ಮಾಡಲು ಅವಕಾಶಗಳು ಸಿಗುತ್ತವೆ ಇದರಿಂದ ಮಕ್ಕಳಿಗೆ ಉತ್ತಮ ಭವಿಷ್ಯ ಮತ್ತು ದಲಿತ ಕಾಲೋನಿಯ ಜನರ ಅಭಿವೃದ್ಧಿ ಹಾಗುವುದು ಎಂದು ತಿಳಿಸಿದರು
ಸ್ಥಳದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷರು ಟಿ ಅಮರೇಶ ಕಾರ್ಯದರ್ಶಿ ಕೆ ದುರ್ಗಪ್ಪ, ಈ ಗುಡಿದೀಶ ಪಿ ಹನುಮೇಶ ಸೋಗಿ ಕೊಟ್ರೇಶ, ಕೆ ಬರಮಪ್ಪ ಕೆ ಬಿ ವೀರೇಶ್, ಅನೇಕ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend