ಹೊಸ ಅಂಗನವಾಡಿ ಕೇಂದ್ರ, ಮತ್ತು ಡಾ”ಬಿ,ಆರ್, ಅಂಬೇಡ್ಕರ್ ಭವನಕ್ಕೆ ಮನವಿ…!!!

Listen to this article

ಹೊಸ ಅಂಗನವಾಡಿ ಕೇಂದ್ರ, ಮತ್ತು ಡಾ”ಬಿ,ಆರ್, ಅಂಬೇಡ್ಕರ್ ಭವನಕ್ಕೆ ಮನವಿ

ವಿಜಯನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲೂಕು ಸೊನ್ನ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘಟನೆಯ ಯುವಕರು ಸುಮಾರು 20 ವರ್ಷಗಳಿಂದ ಅಂಬೇಡ್ಕರ್ ಭವನಕ್ಕೆ ಮನವಿ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ ಇಲ್ಲಿಯವರೆಗೂ ಭವನ ನೀಡಿರುವುದಿಲ್ಲ ಈ ಗ್ರಾಮದ ವಿದ್ಯಾರ್ಥಿಗಳಿಗೆ ಓದಿಕೊಳ್ಳಲು ಮತ್ತು ಅಂಬೇಡ್ಕರ್ ಕಾಲೋನಿಯ ಸಣ್ಣಪುಟ್ಟ ಕಾರ್ಯಕ್ರಮಗಳು ನಡೆಸಲು ಯಾವುದೇ ಸ್ಥಳವಿರುವುದಿಲ್ಲ. ಹಾಗಾಗಿ ದಲಿತ ಕಾಲೋನಿಯ ಜನರಿಗೆ ತುಂಬಾ ತೊಂದರೆ ಆಗುತ್ತಿದೆ, ಕಾಲೋನಿಯ ಅಭಿವೃದ್ಧಿಗಾಗಿ ಗ್ರಂಥಾಲಯ, ದ್ವಾರ ಬಾಗಿಲು ಮತ್ತು ಹೊಸದಾಗಿ ಅಂಗನವಾಡಿ ಕೇಂದ್ರ ಸೊನ್ನ ಗ್ರಾಮದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚು ಹೊಂದಿದ್ದು ನೂತನ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಲು ಮನವಿ ಮಾಡಿದ್ದಾರೆ. ನೂತನ ಅಂಬೇಡ್ಕರ್ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಟಿ ಅಮರೇಶ್ ಅವರು ಮಾತನಾಡಿ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅಂಬೇಡ್ಕರ್ ಭವನ ಮತ್ತು ನೂತನ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಿ ಕೊಡಬೇಕು ಎಂದು ಮನವಿ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೋಗೇಶ್ ಪಂಚಾಯಿತಿ ಕಾರ್ಯಾಲಯ ಸೊನ್ನ ಇವರ ಮುಖಾಂತರ ತಹಶೀಲ್ದಾರ್ ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವರಾಜ್ ಮತ್ತು ಗ್ರಾಮ್ ಪಂಚಾಯತಿ ಸಿಬ್ಬಂದಿಗಳು. ಅಂಬೇಡ್ಕರ್ ಸಂಘಟನೆಯ ಗ್ರಾಮ ಘಟಕದ ಉಪಾಧ್ಯಕ್ಷರು ಎಮ್ ಸಂತೋಷ್ ಸದಸ್ಯರು ಹುಲುಗಪ್ಪ. ಜಯಪ್ಪ. ಮಂಜುನಾಥ. ರಮೇಶ. ಮರಿಯಪ್ಪ ಪಿ ಉಪಸ್ಥಿತರಿದ್ದರು..

ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend