ಬೂದನೂರು:ಶ್ರೀವಿದ್ಯಾಜ್ಯೋತಿ ವಿದ್ಯಾ ಸಂಸ್ಥೆಯಲ್ಲಿ-ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ- ವಿಜಯನಗರ ಜಿಲ್ಲೆ ಹಡಗಲಿ: ಬೂದನೂರು ಶ್ರೀವಿದ್ಯಾಜ್ಯೋತಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎಸ್.ಯಶೋಧ ರವರು, ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆಗೆ ಚಾಲನೆ ನೀಡಿದರು. ಅವರು ಶಾಲಾ ಆವರಣದಲ್ಲಿ ಸಸಿ ನೆಟ್ಟು, ನೀರು ಹಾಕಿ ವಿಶ್ವ ಪ್ರಕೃತಿ ಸಂರಕ್ಷಣೆ ಕುರಿತು ಮಾತನಾಡಿದರು. ಮನುಷ್ಯ ಹುಟ್ಟಿದಾಗಿನಿಂದ ಸಾಯೋ ವರೆಗೆ ಪ್ರಕೃತಿಯನ್ನ ಆಶ್ರಯಿಸುತ್ತಾನೆ, ಆದರೆ ಮನುಷ್ಯ ಪ್ರಕೃತಿಯಲ್ಲಿ ಅಸಮ ತೋಲನ ಸೃಷ್ಠಿಸುತ್ತಾನೆ. ವೈಜ್ಞಾನಿಕತೆ ಆವಿಷ್ಕಾರಗಳ ನೆಪದಲ್ಲಿ, ತನಗರಿವಿಲ್ಲದಂತೆಯೇ ತನ್ನ ಅವನತಿಗೆ ನಾಂದಿ ಹಾಡುತ್ತಾನೆ. ಮನುಷ್ಯ ತಾನೆಷ್ಟೇ ಬುದ್ಧಿ ಜೀವಿಯಾಗಿ ಹಾರಾಡಿದರೂ ಕೂಡ, ಪ್ರಕೃತಿಯ ಮುಂದೆ ಕೂಸು ಮಾತ್ರ ಪ್ರಕೃತಿಯನ್ನ ಪ್ರೀತಿಸಬೇಕು. ಪ್ರಕೃತಿ ಜೀವನ ಕೊಡೋ ತಾಯಿಯಂತೆ ಕಾಣಬೇಕಿದೆ, ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ಶಿಕ್ಷಕಿಯರು, ವಿದ್ಯಾ ಸಂಸ್ಥೆಯ ಸಿಬ್ಬಂದಿಯವರು. ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು…
ವರದಿ. ಮ್ಯಾಗೇರಿ, ಸಂತೋಷ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030