ಹೃದಯಾಘಾತದಿಂದ ನೆರೇಗಾ ಕಾರ್ಮಿಕ ಸಾವು
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ನರೇಗಾ ಯೋಜನೆಯಲ್ಲಿ ಹೂಳೆತ್ತುವ ಕಾಮಗಾರಿ ನಿರ್ವಹಿಸುವಾಗ ಕೂಲಿ ಕಾರ್ಮಿಕರೊಬ್ಬರು ಮಂಗಳವಾರ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮಸಾರಿ ನೆಲ್ಕುದುರಿ ಗ್ರಾಮದ ಕಡ್ಲಿ ರಾಘವೇಂದ್ರ (45 ) ಮೃತ ಕೂಲಿ ಕಾರ್ಮಿಕ.
ತೀವ್ರ ಎದೆನೋವಿನಿಂದ ಸ್ಥಳದಲ್ಲಿ ಕುಸಿದುಬಿದ್ದ ಅವರನ್ನು ತಾಲೂಕು ಆಸ್ಪತ್ರೆಗೆ ಕರೆದು ತರಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆಂದು ನೆರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ ತಿಳಿಸಿದ್ದಾರೆ…
ವರದಿ. ನಾಗಾರ್ಜುನ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030