ಸಿಂಧನೂರು ಸಂಪೂರ್ಣ ಬಂದ್ ಯಶಸ್ವಿ…!!!

Listen to this article

ಸಿಂಧನೂರು ಸಂಪೂರ್ಣ ಬಂದ್ ಯಶಸ್ವಿ..

ಸಿಂಧನೂರ: ತಾಲೂಕಿನಲ್ಲಿ ಐಕ್ಯ ಹೋರಾಟ ಸಮಿತಿ ಸಿಂಧನೂರು ವತಿಯಿಂದ
ಮಾಡಿದ್ದ ಸಿಂಧನೂರು ಬಂದ್ ಕರೆ ಸಂಪೂರ್ಣವಾಗಿ ಯಶಸ್ವಿಗೊಂಡಿದ್ದು. ಬಂದ ಕರೆಗೆ ಕೊಪ್ಪಳ ಲೋಕಸಭೆಯ ಮಾಜಿ ಸಂಸದರಾದ ಕೆ ವಿರುಪಾಕ್ಷಪ ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಬೆಂಬಲ ಸೂಚಿಸಿದರು. ಸಂಪೂರ್ಣವಾಗಿ ಕೆ ಎಸ್ ಆರ್ ಟಿ ಸಿ ಬಸ್ ಬಂದ್ ಮಾಡಲಾಗಿತ್ತು. ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಪ್ರತಿಭಟನಾ ಕಾರರು ಖಾಸಗಿ ವಾಹನಗಳನ್ನು ಸಹ ತಡೆದು ಬಂದ್ ಮಾಡಿದ್ದರು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಓಳ ಮೀಸಲಾತಿ ಜಾರಿ ಮಾಡುತ್ತಿರೋ ಇಲ್ಲವೋ ಆಗಸ್ಟ್ ಒಂದರಂದು ಘನ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಕುರಿತು ರಾಜ್ಯ ಸರ್ಕಾರಗಳಿಗೆ ನೀಡಿರುವ ಪರಮಾಧಿಕಾರದ ತೀರ್ಪನ್ನು ಸ್ವಾಗತಿಸಿರುವುದನ್ನು ಕೇಳಿ ಒಂದು ವಾರದಲ್ಲಿ ಒಳ ಮೀಸಲಾತಿ ಜಾರಿಗೆ ತರಲು ತಾವು ಮುಂದಾಗಬಹುದೆಂದು ಭಾವಿಸಿದ ನಮ್ಮ ನಿರೀಕ್ಷೆ ಹುಸಿಯಾಗಿದೆ ಯಾಕೆ ತಾವುಗಳು ಮೌನವಾಗಿದ್ದೀರಿ ಎನ್ನುವುದು ತಿಳಿಯುತ್ತಿಲ್ಲ ನ್ಯಾಯಾಲಯದ ತೀರ್ಪಿಗೆ ಮುನ್ನ ತಾವು ಹಾಗೂ ತಮ್ಮ ಪಕ್ಷವು ಚಿತ್ರದುರ್ಗದ ಲಕ್ಷಾಂತರ ಜನರ ಸಮಾವೇಶದಲ್ಲಿ ಘೋಷಿಸಿದಂತೆ ನುಡಿದಂತೆ ನಡೆಯುತ್ತಿವೆ ಎಂಬ ಭರವಸೆ ಈಗ ದಿನೇ ದಿನೇ ದೂರವಾಗುತ್ತಿದೆ ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನೊಂದ ಸಮುದಾಯಗಳ ಮಧ್ಯೆ ಪರ ವಿರೋಧದ ಪರಸ್ಪರವಾದ ವಿವಾದಗಳು ಹೆಚ್ಚಾಗಲಿ ಈಗಾಗಲೇ ಸರ್ಕಾರಿ ಹುದ್ದೆಗಳ ನೇಮಕಾತಿ ಮುಗಿದು ಖಾಲಿಯಾಗಲಿ ಮತ್ತೊಂದು 10 15 ವರ್ಷಗಳ ವಿದ್ಯೆ ಉದ್ಯೋಗ ಪಡೆದ ಕೆಲ ಬಲಾಡ್ಯ ಸಮುದಾಯಗಳ ಮತ್ತಷ್ಟು ಬಲಾಡ್ಯರಾಗಲಿ ಅವಕಾಶ ವಂಚಿತ ಬಹುಸಂಖ್ಯಾತರು ಬರೆಗೈಲಿ ಪರದಾಡಲಿ ಎಂಬ ಮನಸ್ಥಿತಿ ಗೆ ನೀವು ಶರಣಾಗಿದ್ದೀರಿ ಎಂಬ ಆತಂಕವು ತಳಸಮುದಾಯಗಳಲ್ಲಿ ಆಸುಹೊಕ್ಕಿದೆ. ಒಳ ಮೀಸಲಾತಿಗಾಗಿ ನಮ್ಮ ಸಮುದಾಯದ ಹಿರಿಯರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ ಕೂಡಲೇ ಒಳ ಮೀಸಲಾತಿ ಜಾರಿ ಮಾಡಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರರು ತಿಳಿಸಿದರು. ಈ ಸಂದರ್ಭದಲ್ಲಿ ಮರಿಯಪ್ಪ ಜಾಲಿಹಾಳ, ಆರ್ ಬೋನ್ವೆಂಚರ್, ಎಚ್ ಎನ್ ಬಡಿಗೇ‌ರ್, ಅಲ್ಲಮ ಪ್ರಭು ಪೂಜಾ‌ರ್, ರಾಮಣ್ಣ ಸಾಸಲಮರಿ,ನಾಗರಾಜ್ ಪೂಜಾರ್, ಸುರೇಶ್ ಎಲೆಕೋಡಿಗಿ, ಮೌನೇಶ್ ಜಾಲವಾಡಗಿ, ಯಲ್ಲಪ್ಪ ಯದ್ದಲದೊಡ್ಡಿ, ಹಾಗೂ ಹೋರಾಟಗಾರರು ಭಾಗವಹಿಸಿದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend