ಕನ್ನಡ ಸಾಹಿತ್ಯ ಪರಿಷತ್ತು ನಿಂದ ದಾರ್ಶನಿಕರ ಮಾಸಿಕ ಕವಿಗೋಷ್ಠಿ…!!!

Listen to this article

ಕನ್ನಡ ಸಾಹಿತ್ಯ ಪರಿಷತ್ತು ನಿಂದ ದಾರ್ಶನಿಕರ ಮಾಸಿಕ ಕವಿಗೋಷ್ಠಿ.

ಸಿಂಧನೂರು: ಜೂ-23 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಸಿಕ ಕವಿಗೋಷ್ಠಿಯನ್ನು ಜೂನ್-26 ರಂದು ರವಿವಾರ ಸಿಂಧನೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ.

ಅವರು ಈ ಕುರಿತು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಪರಿಷತ್ತಿನ ನಾವಿನ್ಯತಾ ಕಾರ್ಯಕ್ರಮ ‘ದಾರ್ಶನಿಕರ ಮಾಸಿಕ ಕವಿಗೋಷ್ಠಿ ಅಡಿಯಲ್ಲಿ ಜೂನ್-2022 ಮಾಹೆಯಲ್ಲಿ ಮಹಾನ್ ದಾರ್ಶನಿಕರಾದ ಶ್ರೀ ಸಂತ ಶಿಶುನಾಳ ಶರೀಫರವರ ಬದುಕು-ಬರಹದ ಕುರಿತು ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಆಸಕ್ತ ಕವಿಗಳು ಶಿಶುನಾಳ ಶರೀಫರ ಅವರ ಕುರಿತು 25 ಸಾಲುಗಳು ಮೀರದಂತೆ ತಮ್ಮ ಸ್ವರಚಿತ ಕವನವನ್ನು ರಚಿಸಿ ಈ ಕೆಳಗಿನ ಮಿಂಚಂಚೆ: kasapa.sindhanur22@gmail.com ಅಥವಾ ವಾಟ್ಸಪ್ ಸಂಖ್ಯೆ (9980094144)ಗೆ ಕಳುಹಿಸಲು ಈ ಮೂಲಕ ಕೋರಲಾಗಿದೆ.

ಆಯ್ಕೆಯಾದ ಕವನಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಾರ್ಯದರ್ಶಿಗಳಾದ ವೀರೇಶ ಗೋನವಾರ (9620091050), ಮೌಲಪ್ಪ ಮಾಡಶಿರವಾರ (97403 71463) ಇವರನ್ನು ಸಂಪರ್ಕಿಸಲು ಕೋರಿದ್ದಾರೆ…

 

ವರದಿ.ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend