ಕನ್ನಡ ಸಾಹಿತ್ಯ ಪರಿಷತ್ತು ನಿಂದ ದಾರ್ಶನಿಕರ ಮಾಸಿಕ ಕವಿಗೋಷ್ಠಿ.
ಸಿಂಧನೂರು: ಜೂ-23 ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಸಿಕ ಕವಿಗೋಷ್ಠಿಯನ್ನು ಜೂನ್-26 ರಂದು ರವಿವಾರ ಸಿಂಧನೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ತಿಳಿಸಿದ್ದಾರೆ.
ಅವರು ಈ ಕುರಿತು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ಪರಿಷತ್ತಿನ ನಾವಿನ್ಯತಾ ಕಾರ್ಯಕ್ರಮ ‘ದಾರ್ಶನಿಕರ ಮಾಸಿಕ ಕವಿಗೋಷ್ಠಿ ಅಡಿಯಲ್ಲಿ ಜೂನ್-2022 ಮಾಹೆಯಲ್ಲಿ ಮಹಾನ್ ದಾರ್ಶನಿಕರಾದ ಶ್ರೀ ಸಂತ ಶಿಶುನಾಳ ಶರೀಫರವರ ಬದುಕು-ಬರಹದ ಕುರಿತು ಕವಿಗೋಷ್ಠಿಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಆಸಕ್ತ ಕವಿಗಳು ಶಿಶುನಾಳ ಶರೀಫರ ಅವರ ಕುರಿತು 25 ಸಾಲುಗಳು ಮೀರದಂತೆ ತಮ್ಮ ಸ್ವರಚಿತ ಕವನವನ್ನು ರಚಿಸಿ ಈ ಕೆಳಗಿನ ಮಿಂಚಂಚೆ: kasapa.sindhanur22@gmail.com ಅಥವಾ ವಾಟ್ಸಪ್ ಸಂಖ್ಯೆ (9980094144)ಗೆ ಕಳುಹಿಸಲು ಈ ಮೂಲಕ ಕೋರಲಾಗಿದೆ.
ಆಯ್ಕೆಯಾದ ಕವನಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪರಿಷತ್ತಿನ ಕಾರ್ಯದರ್ಶಿಗಳಾದ ವೀರೇಶ ಗೋನವಾರ (9620091050), ಮೌಲಪ್ಪ ಮಾಡಶಿರವಾರ (97403 71463) ಇವರನ್ನು ಸಂಪರ್ಕಿಸಲು ಕೋರಿದ್ದಾರೆ…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030