ರಬಕವಿ ಬನಹಟ್ಟಿಯ ಕೃಷ್ಣ ನದಿಯ ತೀರದಲ್ಲಿ ಬೊಟ್ ಸೇವೆ ಆರಂಭ…!!!

Listen to this article

ರಬಕವಿ ಬನಹಟ್ಟಿ :-ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಸಮೀಪದ ಅಥಣಿ ತಾಲ್ಲೂಕಿನ ಮಹೀಷವಾಡಗಿ ಸೇತುವೆ ನೀರಿನಲ್ಲಿ ಮುಳುಗಿರುವುದರಿಂದ ನದಿಯಲ್ಲಿ ಈಗ ಬೋಟ್ ಸೇವೆ ಆರಂಭಗೊಂಡಿದೆ.

ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಅಥಣಿ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಇದು ಬಹಳಷ್ಟು ಅನುಕೂಲವಾಗಿದೆ. ನಿತ್ಯ ಎರಡು ತಾಲ್ಲೂಕುಗಳ ಸಾವಿರಾರು ಜನರು ಬೋಟ್ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಅಸುರಕ್ಷತೆಯ ಪ್ರಯಾಣ: ನದಿಯ ಮೂಲಕ ಪ್ರಯಾಣ ಮಾಡುವವರಿಗೆ ಯಾವುದೆ ಸುರಕ್ಷತೆ ಇಲ್ಲ. ಇಲ್ಲಿಯ ಪ್ರಯಾಣಿಕರಿಗೆ ಜೀವ ರಕ್ಷಕ ಕವಚಗಳ ಸೌಲಭ್ಯ ಕೂಡ ಇಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಜೀವ ರಕ್ಷಕ ಕವಚಗಳನ್ನು ವಿತರಣೆ ಮಾಡುವಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend