ಸಿಪಿಐ(ಎಂ) ತಾಲೂಕು ಸಮ್ಮೇಳನ
ದೇಶದ ಶ್ರಮಜೀವಿಗಳಿಗಿಲ್ಲ ಅಚ್ಚೇದಿನ್: ಶಬ್ಬೀರ್
ಲಿಂಗಸೂಗೂರು: ‘ಅಚ್ಚೇ ದಿನ’ಗಳನ್ನು ಜಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅವರ ಒಡನಾಡಿಗಳಾದ ಅದಾನಿ, ಅಂಬಾನಿಯರಿಗೆ ಅಚ್ಚೇ ದಿನಗಳು ಬಂದಿವೆ, ವಿನಃ ದೇಶದ ಶ್ರಮಿಕ, ಬಡ ಕೂಲಿ-ಕಾರ್ಮಿಕರಿಗೆ, ಯುವಜನರಿಗೆ ಒಳ್ಳೆಯ ದಿನಗಳು ಬಂದಿಲ್ಲ.’ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಬ್ಬೀರ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹಟ್ಟಿ ಪಟ್ಟಣದ ಪೈ ಭವನದಲ್ಲಿ ಸಿಪಿಐ (ಎಂ) ಪಕ್ಷದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಡವರು, ಕಾರ್ಮಿಕರು ಅನುಭವಿಸುತ್ತಿರುವ ಕಷ್ಟಗಳನ್ನು ಗಮನಿಸುತ್ತಿಲ್ಲ. ದೇಶ, ದೇಶಗಳ ಸುತ್ತಾಟ ನಡೆಸಿ ಬಂಡವಾಳ ಶಾಹಿಗಳ ಪರವಾದ ಯೋಜನೆಗಳನ್ನು ಜಾರಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ಜಿ ವೀರೇಶ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿ ಬಡವರ ಬದುಕನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ವಿದ್ಯಾವಂತ ಯುವಜನರಿಗೆ ಉದ್ಯೋಗದಂತೆ ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಸಾಲಕ್ಕೆ ತುತ್ತಾಗಿ ಜಮೀನು ಮಾರಿ ಮಹಾನಗರಗಳಿಗೆ ಗುಳೆ ಹೊರಟಿದ್ದಾರೆ ಎಂದರು.
ಕಾರ್ಯದರ್ಶಿ ಮಂಡಳಿ ಸದಸ್ಯ ನರಸಣ್ಣ ನಾಯಕ ಮಾತನಾಡಿದರು. ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಸಮಿತಿ ಸದಸ್ಯರಾದ ಸಂಗಪ್ಪ ಸಗರದ್, ಆಂಜನೇಯ ನಾಗಲಾಪೂರು, ಪರಶುರಾಮ ಹಲ್ಕಾವಟಗಿ, ಪಕ್ಷದ ಸದಸ್ಯರಾದ ನಿಂಗಪ್ಪ ಎಂ, ಅಲ್ಲಾಭಕ್ಷ, ಹನೀಫ್, ದಾವೂದ್, ನಜೀರ್ ಮಾಚನೂರು, ಅಮರೇಶ ಗುರಿಕಾರ್, ಮಹ್ಮದ್ ಅಲಿ, ಸರಸ್ವತಿ ಈಚನಾಳ, ಅಕ್ಬರ್, ಮಹಾಂತೇಶ ಮುದಗಲ್, ನಾಗರಾಜ್, ಚೆನ್ನಬಸವ ವಂದ್ಲಿ ಹೊಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…
ವರದಿ. ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030