ಮಾನ್ವಿ : ರಸ್ತೆ ಅಪಘಾತ ಯುವಕ ಸಾವು
ಮಾನ್ವಿ ಅ 19 :- ತಾಲೂಕಿನ ಚಿಮ್ಲಾಪುರು ಕ್ರಾಸ್ ಬಳಿ ಬೈಕಿಗೆ ಕಾರು ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ರಾಘವೇಂದ್ರ (37) ಸ್ಥಳದಲ್ಲೇ ಮೃತ ಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಬೈಕ್ ಸವಾರ ರಾಘವೇಂದ್ರ ಚಿಮ್ಲಾಪುರು ಗ್ರಾಮದ ವ್ಯಕ್ತಿಯಾಗಿದ್ದು ಮಾನ್ವಿಯಿಂದ ಸ್ವಗ್ರಾಮ ಚಿಮ್ಲಾಪುರು ಗ್ರಾಮಕ್ಕೆ ಹೊರಟಾಗ ರಾಯಚೂರು ಕಡೆಯಿಂದ ಮಾನ್ವಿ ಕಡೆ ಬರುತ್ತಿದ್ದ ಕಾರು ಚಿಮ್ಲಾಪುರ ಕ್ರಾಸ್ ಬಳಿ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಜರುಗಿದೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ವರದಿ, ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030