ದಿನಾಂಕ 23/9/2024 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣ ಸಂಘಟನೆಯ ವತಿಯಿಂದ ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು
ಅಮಾಯಕ ಜನರಿಗೆ ಗೋಕಾಕ ನಗರದ ಆಶ್ರಯ ಬಡಾವಣೆಯ ಒಬ್ಬಳು ಮಹಿಳೆ ತಾನು sc st ಜಾತಿಗೆ ಸೇರಿದವಳು ಎಂದು ಸುಳ್ಳು ಹೇಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣ ಸಂಘಟನೆಯ ಗೋಕಾಕ ತಾಲುಕಾ ಅದ್ಯಕ್ಷ ಸ್ಥಾನ ಪಡೇದು ಆರು ತಿಂಗಳ ನಂತರ ಅವಳು sc/st ಅಲ್ಲ ಎಂದು ಸಂಘಟನೆಯವರಿಗೆ ತಿಳಿದ ತಕ್ಷಣ ರಾಜೀನಾಮೆ ನೀಡಿದ. ಮಹಿಳೆ ಹಲವಾರ
ಜನರಿಗೆ ಸಬಸಿಡಿ ಸಹಾಯದನ ಲೋನ ಮಾಡಿಸಿ ಕೊಡುತ್ತೆನೆ ಎಂದು ಹೇಳಿ ಹಲವಾರು ನಮ್ಮ ಸಂಘಟನೆಯ ಪದಾಧಿಕಾರಿಗಳಿಂದ ಹಾಗೂ ಅಮಾಯಕ ಜನರಿಂದ 2 ರಿಂದ 5 ಲಕ್ಷದ ವರೆಗೆ ಹಣ ತೆಗೆದುಕೊಂಡು ಜನರಿಗೆ ಮೋಸ ಮಾಡಿದ ವಿಷಯದ ಕುರಿತು ಮಾನ್ಯ ಗೌರವಾನ್ವಿತ ಜಿಲ್ಲಾ ಪೋಲಿಷ್ ವರಿಷ್ಠಾದಿಕಾರಿಗಳು ಬೆಳಗಾವಿ ಹಾಗೂ ಮಾನ್ಯ ಗೌರವಾನ್ವಿತ ಪ್ರಾದೇಶಿಕ ಆಯುಕ್ತರು ಬೆಳಗಾವಿ ರವರಿಗೆ ದಾಖಲೆ ಸಮೆತ ದೂರು ಸಲ್ಲಿಸಲಾಯಿತು
ಹಲವಾರು ಜನರು ಬ್ಯಾಂಕ ಖಾತೆಯಿಂದ RTGS ಹಾಗೂ ಪೋನ ಪೇ ಇನ್ನು ಕೆಲವರು ಕೈಯಲ್ಲಿ ಹಣ ಕೊಟ್ಟಿರುವ ದಾಖಲೆಗಳನ್ನು ಪೋಲಿಷ ಇಲಾಖೆಗೆ ನೀಡಲಾಯಿತು
ಅಮಾಯಕ ಜನರಿಗ ಲೋನ ಮಾಡಿಸಿ ಕೊಡದೇ ಮೋಸ ಮಾಡಿ ವಂಚನೆ ಮಾಡಿದ ಮಹಿಳೆ ಅಷ್ಟೆ ಅಲ್ಲ ಅವಳ ಜೊತೆಗೆ ಬ್ಯಾಂಕ್ ಸಿಬ್ಬಂದಿ ಅಂತ ಐದು ಜನರು ಈ ವಂಚನೆಯ ಗುಂಪಿನಲ್ಲಿರುವ ಇದ್ದಾರೆ ಅವರ ಮೇಲೆ ಕೂಡ ದೂರು ನೀಡಲಾಗಿದೆ
ಮಾನ್ಯ ಗೌರವಾನ್ವಿತ ಪ್ರಾದೇಶಿಕ ಆಯುಕ್ತರು ಬೆಳಗಾವಿ ಹಾಗೂ
ಮಾನ್ಯ ಗೌರವಾನ್ವಿತ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿಗಳು ಬೆಳಗಾವಿ ರವರಿಗೆ ಬೃಹತ್ ಪ್ರಮಾಣದ ಪ್ರತಿಭಟನೆ ಮುಖಾಂತರ ದೂರು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ 300 ರಿಂದ 500 ಜನರು ಬಾಗಿಯಾಗಿದ್ದರು ಇನ್ನೂ ಹಲವಾರು ಬಹಿರಂಗ ಪಡಿಸದ ವಿಷಯಗಳ ಕುರತು ದೂರು ಸಲ್ಲಿಸಲಾಗಿದೆ
ಯಾವಾಗ ಜನರಿಗೆ ಈ ಮಹಿಳೆಯ ನಿಜ ಬಣ್ಣ ತಿಳಿದ ತಕ್ಷಣ ಜನರು ಹಣ ಕೇಳಿದಾಗ ಜನರಿಗೆ ಚೆಕ್ ನೀಡಿದ್ದಾಳೆ ಆ ಖಾತೆಯಲ್ಲಿ ಯಾವುದೇ ಹಣ ಇರುವುದಿಲ್ಲ ಅಂತಹ ಖಾತೆಯ ಚೆಕ್ ನೀಡಿ ಅಮಾಯಕ ಜನರಿಗೆ ವಂಚನೆ ಮಾಡಿದ ಮಹಿಳೆ ಕುರಿತು ದಾಖಲೆಯನ್ನು ಪೋಲಿಸ್ ಇಲಾಖೆಗೆ ಸಲ್ಲಿಸಲಾಗಿದೆ
ಸಂಘಟನೆಯ ರಾಜ್ಯದ ಅದ್ಯಕ್ಷರು ಮತ್ತು ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲುಕಾ ಸಮಿತಿ ಪುರುಷ ಮತ್ತು ಮಹಿಳಾ ಅದ್ಯಕ್ಷರು ಪದಾಧಿಕಾರಿಗಳು ಪ್ರತಿಭಟನೆ ಹೋರಾಟದಲ್ಲಿ ಬಾಗಿಯಾಗಿದ್ದರು
ನೊಂದ ಅಮಾಯಕ ಜನರಿಗೆ ನ್ಯಾಯ ಸಿಗುವ ವರೆಗೆ ಅಮಾಯಕರಿಗೆ ವಂಚಿಸಿ ಹಣ ಪಡೇದ ಮಹಿಳೆಯ ವಿರುದ್ದ ನಮ್ಮ ಹೋರಾಟ ನಿರಂತರವಾಗಿ ಇರುತ್ತದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030