ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ಇವರ ವತಿಯಿಂದ ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ…!!!

Listen to this article

ಪ್ರಶಸ್ತಿಗೆ ಅರ್ಜಿ ಆಹ್ವಾನ

ಚಿಕ್ಕೋಡಿ: ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ ಇವರ ವತಿಯಿಂದ ರಾಜ್ಯಮಟ್ಟದ ಗುರುತಿಲಕ ಆದರ್ಶ ಶಿಕ್ಷಕ ಪ್ರಶಸ್ತಿ 20024-25 ನೇ ಸಾಲಿನ ಹಾಗೂ ಜನ‌ಮೆಚ್ಚಿದ ಕರ್ನಾಟಕ ರತ್ನ 2024-25 ಸಾಲಿನ ಪ್ರಶಸ್ತಿ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು ಅಂಕ‌ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಅತ್ಯುತ್ತಮ‌ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದು ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾದ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪಾಸಾಹೇಬ.ಶ್ರೀಪತಿ.ಕುರಣೆ ತಿಳಿಸಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ‌ ಸೇವೆ ಸಲ್ಲಿಸಿದ ಶಿಕ್ಷಕರಿಗೆ ರಾಜ್ಯಮಟ್ಟದ ಗುರುತಿಲಕ ಪ್ರಶಸ್ತಿ ನೀಡಿ ಗೌರವಿಸಲಾಗುವದು.ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಮಾಜ ಸೇವಕರು ಹಾಗೂ ಸಂಘ ಸಂಸ್ಥೆಗಳು,ಸಾಹಿತಿಗಳಿಗೆ ರಾಜ್ಯಮಟ್ಟದ ಜನಮೆಚ್ಚಿದ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವದು.ಎಸ್.ಎಸ್.ಎಲ್.ಸಿ,ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.95 ಕಿಂತ ಹೆಚ್ಚು ಅಂಕ ಪಡೆದ ಅತ್ಯುತ್ತಮ‌ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದರು.ಆಸಕ್ತಿರು ತಮ್ಮ ಸ್ವವಿವರಗಳೊಂದಿಗೆ ಅಗತ್ಯವಾದ ದಾಖಲೆಗಳೊಂದಿಗೆ ಇತ್ತಿಚಿನ ಎರಡು ಭಾವಚಿತ್ರಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ 25 ರೊಳಗಾಗಿ ಕಳುಹಿಸಬೇಕು.
ಅಪ್ಪಾಸಾಹೇಬ.ಶ್ರೀಪತಿ.ಕುರಣೆ
ಅಧ್ಯಕ್ಷರು ವಂದೆ ಮಾತರಂ ಟ್ರಸ್ಟ ಆಫ್ ಇಂಡಿಯಾ
ಅಂಚೆ: ಯಕ್ಸಂಬಾ,ತಾಲೂಕು: ಚಿಕ್ಕೋಡಿ,ಜಿಲ್ಲಾ : ಬೆಳಗಾವಿ
ಪಿನ್ ಕೊಡ್-591244
ಮೊಬಾಯಿಲ್ ಸಂಖ್ಯೆ- 9480053100,9902346557
ಇವರನ್ನು ಸಂಪರ್ಕಿಸಲು ಕೋರಲಾಗಿದೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend