ಪರಿಶಿಷ್ಟ ವರ್ಗ ಮತ್ತು ಪಂಗಡ ಸಮುದಾಯದ ಸ್ಮಾಶಾಣದ ಭೂ ಕಬಳಿಕೆ…!!!

Listen to this article

ಪರಿಶಿಷ್ಟ ವರ್ಗ ಮತ್ತು ಪಂಗಡ ಸಮುದಾಯದ ಸ್ಮಾಶಾಣದ ಭೂ ಕಬಳಿಕೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಸ್ಮಶಾನ ಭೂಮಿಯ 20 ಗುಂಟೆ ಜಮೀನನ್ನು ಸರ್ವೇ ನಂಬರ್ 23/26 ಈ ಜಾಗವನ್ನು ಮತ್ತು ಸಾರ್ವಜನಿಕ ರಸ್ತೆಯನ್ನು ಕೂಡಾ ಅಡಿವೆಪ್ಪಾಅಂಕಲಗಿ ಅತಿಕ್ರಮಣ ಮಾಡಿದ್ದು ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಮುಖಂಡರು ಇಂದು ಈ ಜಾಗದಲ್ಲಿ ಸ್ಮಶಾನ ಭೂಮಿಗೆ ಸಂಬಂಧಪಟ್ಟ ಬೋರ್ಡನ್ನು ಹಾಕಿದ ಸಂದರ್ಭದಲ್ಲಿ ಅಡಿವೆಪ್ಪ ಅಂಕಲಿಗಿ ಹಾಗೂ ಅಶೋಕ್ ಅಂಕಲಿಗಿ ಈ ಬೋರ್ಡಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಇವರ ಭಾವಚಿತ್ರ ಇರುವ ಬೋರ್ಡನ್ನು ಕಾಲಿನಿಂದ ಓದ್ದು ಕಿತ್ತು ಹಾಕಿದ್ದಾರೆ.

ಮತ್ತು ಓರ್ವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ಆದ ಕಾರಣ ಈ ಜಾಗದಲ್ಲಿ ಇಂದು ಅವರಗೋಳ ಗ್ರಾಮದ ದಲಿತರು ಧರಣಿ ಸತ್ಯಾಗ್ರಹ ನಿರಂತರವಾಗಿ ನಡೆಸುತ್ತಿದ್ದಾರೆ.

ಪ್ರತಿ ಸಲವೂ ದಲಿತರ ಮೇಲೆ ಅನ್ಯಾಯವಾಗುತ್ತಿದೆ ಈ ವಿಷಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಗಮನಕ್ಕೆ ಮಾಹಿತಿ ಇದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ.

ಸಂಭಂದ ಪಟ್ಟ ಅಧಿಕಾರಿಗಳು ಕೂಡಲೇ ನೊಂದ ಜನರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮುಖಂಡರುಗಳು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ, ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend