ದರ್ಶನ್ ಅರೆಸ್ಟ್ ಕೇಸ್, ಯಾರನ್ನು ಕಾಪಾಡುವ ಪ್ರಶ್ನೆ ಇಲ್ಲ, ಶಿವರಾಜ್ ತಂಗಡಗಿ…!!!

Listen to this article

ಬೆಂಗಳೂರು :ನಟ ದರ್ಶನ್ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸ್ತಾರೆ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.

ನೀಟ್ ಪರೀಕ್ಷೆ ಅಕ್ರಮ: ಕೇಂದ್ರ ಸರ್ಕಾರದ ಮೌನ ಖಂಡಿಸಿ ಯುವ ಕಾಂಗ್ರೆಸ್ ನಿಂದ ಬೆಂಗಳೂರಲ್ಲಿ ಪ್ರತಿಭಟನೆ!

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಟ ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆ ಆಗುವುದು ಖಚಿತ.

ಎಷ್ಟೇ ದೊಡ್ಡವರಾದರೂ ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸರ್ಕಾರದಿಂದ ಯಾರನ್ನೂ ಕಾಪಾಡುವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸಣ್ಣ ಸಣ್ಣ ವಿಚಾರಕ್ಕೆ ಜೀವ ತೆಗೆಯುವ ಕೆಲಸ ಮಾಡಬಾರದು. ಇದು ಸರಿಯಲ್ಲ. ದರ್ಶನ್ ತಪ್ಪು ಮಾಡಿದ್ರೆ ಅವರು ಅನುಭವಿಸುತ್ತಾರೆ. ಇದರಲ್ಲಿ ನಾವು ರಕ್ಷಣೆ ಮಾಡುವ ಕೆಲಸ ಮಾಡುವುದಿಲ್ಲ. ಪ್ರಕರಣದ ತನಿಖೆ ಆಗುತ್ತಿದೆ. ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಅವರು ಹೇಳಿದ್ದಾರೆ

ಇನ್ನೂ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ವಿಚಾರವಾಗಿ ಮಾತನಾಡಿ, ಇದು ನಮ್ಮ‌ಗಮನಕ್ಕೆ ಬಂದಿದೆ. ಗಡಿ ಪ್ರಾಧಿಕಾರದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಅಲ್ಲಿನ ಸಂಬಂಧಪಟ್ಟವರಿಗೆ ಬರೆದಿದ್ದಾರೆ. ನಮ್ಮ ಸಿಎಂ ಅಲ್ಲಿನ ಸಿಎಂ ಜೊತೆ ಚರ್ಚೆ ಮಾಡ್ತಾರೆ. ಗಡಿ ಪ್ರಾಧಿಕಾರದ ಅಧ್ಯಕ್ಷರು ಅಲ್ಲಿಗೆ ಭೇಟಿ ಕೊಡ್ತಾರೆ. ಗಡಿ ಭಾಗದಲ್ಲಿ ಸಾಕಷ್ಟು ಸಮಸ್ಯೆ ಆಗ್ತಿವೆ..ಪದೇ ಪದೇ ಇಂತಹ ವಿಚಾರ ಎದುರಾಗ್ತಿವೆ. ನಾವು ಜಿಲ್ಲಾಧಿಕಾರಿಗಳ ಜೊತೆ ಮಾತನಾಡ್ತೇನೆ..ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತೇವೆ. ಪುರುಷೋತ್ತಮ ಬಿಳಿಮಲೆಯವರು ಭೇಟಿ ಕೊಡ್ತಾರೆ..ಇದರ ಬಗ್ಗೆ ಅವರು ಗಮನ ಹರಿಸ್ತಾರೆ ಎಂದು
ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend