ಮೈಸೂರಲ್ಲಿ ಸಂಗೀತದ ರಸದೌತಣ ನೀಡಿದ ಗುಳೇದಗುಡ್ಡ ತಂಡ
ಗುಳೇದಗುಡ್ಡ : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ಗೌರಿ ಗಣೇಶ ಸಾಂಸ್ಕೃತಿಕ ಕಲಾ ತಂಡದವರಿಂದ ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಸಂಜೆ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು. ಸಂಗೀತ ಶಿಕ್ಷಕ ಬಸವರಾಜ ಸಿಂದಗಿಮಠ, ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ, ಸಂಗೀತ ಶಿಕ್ಷಕ ಶ್ರೀಕಾಂತ ಚಿಮ್ಮಲ, ವೈಷ್ಣವಿ ಗೂಳಿ, ಶ್ರೀಧರ ವಂದಾಲ, ಮೌನೇಶ ಬಡಿಗೇರ, ಮಲ್ಲು ಪೂಜಾರ ಅವರು ಸಂಗೀತ ರಸದೌತಣ ನೀಡಿ ಜನರನ್ನು ರಂಜಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಾವಿದರಿಗೆ ಮೈಸೂರು ದಸರಾ ಉತ್ಸವ ಸಮಿತಿಯವರು ಪ್ರಶಸ್ತಿ ನೀಡಿ ಗೌರವಿಸಿದರು…
ವರದಿ. ಸಚಿನ್ ಬಾಗಲಕೋಟ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030