ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಔಷಧಿ ವ್ಯಾಪಾರಸ್ತರ ಬೆಂಬಲ
ಮಹಾಲಿಂಗಪುರ ತಾಲ್ಲೂಕುಗಾಗಿ ನಿರಂತರವಾಗಿ ಮುಂದುವರಿದ ಹೋರಾಟ ಪ್ರತಿದಿನ ಕಾವು ಹೆಚ್ಚುತಲೆ ಇದ್ದು ಸರ್ಕಾರದ ಗಮನ ಸೆಳೆದು ತಾಲ್ಲೂಕು ಘೋಷಿಣೆಗೆ ಸರ್ಕಾರಕ್ಕೆ ಒತ್ತಡ ತರುವ ಪ್ರಯತ್ನ ನಿರಂತರವಾಗಿ ಹಲವಾರು ಸಂಘ ಸಂಸ್ಥೆಗಳಿಂದ ವಿವಿಧ ರೀತಿಯಲ್ಲಿ ಸಂಘಟನೆಗಳು, ಜನಪದ ಕಲಾ ಸಂಘಗಳು ತಮ್ಮ ಕಲೆ ಪ್ರದರ್ಶನ ಮಾಡುವ ಮೂಲಕ ಪ್ರತಿಭಟನೆ ನಡೆಯುತ್ತಲೆ ಇದೆ. ಇಂದು ಎಪ್ಪತ್ತು ನಾಲ್ಕನೆ ದಿನಕ್ಕೆ ಕಾಲಿಟ್ಟ ಹೋರಾಟದ ಪ್ರತಿಭಟನೆಗೆ ಸುತ್ತ ಹತ್ತಾರು ಹಳ್ಳಿಗಳಿಗೆ ವೈದ್ಯಕೀಯ ಸವಲತ್ತುಗಳಿಗೆ ಆಸರೆಯಾದ ಮಹಾಲಿಂಗಪುರ ನಗರದ ಹೋಲ್ ಸೇಲ್ ಮತ್ತು ರೀಟೆಲ್ ಔಷಧಿ ವ್ಯಾಪಾರಸ್ತರು ಪ್ರತಿಭಟನೆಗೆ ಸಹಮತದಿಂದ ಬೆಂಬಲ ಸೂಚಿಸಿದರು. ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಮಹಾಲಿಂಗಪುರ ನಗರದ ಔಷಧಿ ವ್ಯಾಪಾರಸ್ತರಾದ ಶ್ರೀಪಾದ ಗುಂಡಾ,ರವಿ ಗೊಬ್ಬಾನಿ,ರಾಜು ನಂದೆಪ್ಪನವರ,ಅನೀಲ್ ಉಳ್ಳಾಗಡ್ಡಿ,ಆನಂದ ಬೆಳ್ಳಿಕಟ್ಟಿ, ಶಿವಾನಂದ ಚೌಲಗಿ,ಮೌನೇಶ ಜಮಖಂಡಿ,ಪ್ರಭು ಬ್ಯಾಳಿ, ಮಹಾಲಿಂಗ ವಜ್ಜರಮಟ್ಟಿ,ಸಂತೋಷ ತಿಪ್ಪಾ,ಸಂತೋಷ ದಢೂತಿ ಉಪಸ್ಥತರಿದ್ದರು.
ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030