ನಿಧನ ವಾರ್ತೆ:ಶಹಪುರ ವೆಂಕಟೇಶ್ ಮಾನು-ಬೆಂಗಳೂರು…!!!

Listen to this article

ನಿಧನ ವಾರ್ತೆ:ಶಹಪುರ ವೆಂಕಟೇಶ್ ಮಾನು-ಬೆಂಗಳೂರು- ಬಳ್ಳಾರಿಯಲ್ಲಿ 2007-10ರಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ಜಿಲ್ಲ‍ಾ ವರದಿಗಾರರಾಗಿದ್ದ. ಈ ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿದ್ದು, ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ. ವೆಂಕಟೇಶ ಮಾನು(53)ರವರು, ಜುಲೈ12ರ ಬೆಳಗಿನ ಜಾವ ಜಿ.ಎಮ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಬಹುದಿನಗಳಿಂದ ಕಾರ್ಡಿಯಾರ್ ಅಂಗದಲ್ಲಿ ಸೋಂಕು ಕಾಣಿಸಿಕೊಂಡು ಭಾದೆಯಿಂದ ಬಳಲು ತಿದ್ದರು, ಅವರು ಜಿ.ಎಮ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಎಡ್ಮೂರು ದಶಕಗಳ ಕಾಲ ಪತ್ರಿಕೋಧ್ಯಮದಲ್ಲಿ, ಸೇವೆ ಸಲ್ಲಿಸಿದ್ದು ಸರಳ ಹಾಗೂ ಸ್ನೇಹ ಜೀವಿಗಳೆಸದೇ ಗಿರುತಿಸಿಕೊಂಡಿದ್ದರು. ವೆಂಕಟೇಶ್ ಮಾನು ರವರು, ಮೂಲತಃ ಕಲ್ಬುರ್ಗಿ ಜಿಲ್ಲೆಯ ಶಹಪುರದವರಾಗಿದ್ದಾರೆ. ಅನೆೇಕ ವರ್ಷಗಳ ಕಾಲ ಬಳ್ಳಾರಿಯಲ್ಲಿದ್ದು, ಪತ್ರಿಕಾರಂಗದಲ್ಲಿ ಪ್ರಮುಖ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಕಾರಣಾಂತರಗಳಿಂದಾಗಿ ಅವರು, ಹಲವು ವರ್ಷಗಳ ಹಿಂದೆಯೇ ಕುಟುಂಬ ಸಮೇತರಾಗಿ ಬೆಂಗಳೂರು ಮಹಾನಗರಕ್ಕೆ ಸ್ಥಳಾಂತರವಾಗಿದ್ದರು. ಅವರು ಪತ್ನಿ ಸಮೇತ ತುಂಬು ಕುಟುಂಬ ಹೊಂದಿದವರಾಗಿದ್ದರು, ಅಪಾರ ಸ್ನೇಹಿತರ ವರ್ಗ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ. *ಅಂತ್ಯಕ್ರಿಯೆ:-* , ವೆಂಕಟೇಶ ಮಾನು ರವರ ಅಂತಿಮ ಕಳೇಬರ ದರ್ಶನ, ಬೆಂಗಳೂರಿನ ನಾಗರಬಾವಿಯಲ್ಲಿನ ಅವರ ವಾಸ ಗೃಹದಲ್ಲಿ. ಜುಲೈ12ರಂದು ಬೆಳಿಗ್ಗೆ 9ಗಂಟೆವರೆಗೆ ಅವಕಾಶವಿರುತ್ತದೆ, ನಂತರ ಅವರ ಕಳೇಬರವನ್ನು. ಅವರ ಜನ್ಮಭೂಮಿ ಕಲ್ಬುರ್ಗಿ ಜಿಲ್ಲೆಯ ಶಹಪುರಕ್ಕೆ ಕೊಂಡೊಯ್ಯಲಾಗುವುದು, ಅಲ್ಲಿ ಜುಲೈ 13ರಂದು ಅವರ ಅಂತ್ಯ ಕ್ರಿಯೆ ಜರುಗಿಸಲಾಗುವುದು. ಶ್ರದ್ಧಾಂಜಲಿ ಅರ್ಪಣೆ- ಇಹ ಲೋಕ ತ್ಯಜಿಸಿದ ವೆಂಕಟೇಶ ಮಾನುರವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸೆಂದು ಭಗವಂತನಲ್ಲಿ ಕೋರಿ, ಬಳ್ಳಾರಿ ಜಿಲ್ಲೆಯ ಹಾಗೂ ವಿಜಯನಗರ ಜಿಲ್ಲೆಯ ಸಮಸ್ತ ಪತ್ರಕರ್ತರು ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend