ಗೃಹರಕ್ಷಕರ ಈಶಾನ್ಯ ವಲಯಮಟ್ಟದ ಕ್ರೀಡಾಕೂಟ ಸಮಾರೋಪ ಸಮಾರಂಭ
ಬಳ್ಳಾರಿ,ನ.: ಜಿಲ್ಲಾ ಗೃಹರಕ್ಷಕದಳ ವತಿಯಿಂದ ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ಗೃಹರಕ್ಷಕರ ಈಶಾನ್ಯ ವಲಯಮಟ್ಟದ ವೃತ್ತಿಪರ ಹಾಗೂ ಕ್ರೀಡಾ ಕೂಟದ ಸಮಾರೋಪ ಸಮಾರಂಭ ಮಂಗಳವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ ಕುಮಾರ ಬಂಡಾರು ಮಾತನಾಡಿ, ಗೃಹರಕ್ಷಕರು ತಮ್ಮ ಕೆಲಸದ ಒತ್ತಡದಿಂದ ಮುಂದೆ ಬಂದು ಕ್ರೀಡೆಗಳಲ್ಲಿ ಭಾಗವಹಿಸುವುದು ಸಂತಸದ ವಿಷಯ. ಈಶಾನ್ಯ ವಲಯದ ಆರು ಜಿಲ್ಲೆಗಳಿಂದ ಗೃಹರಕ್ಷಕರು ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಗೃಹರಕ್ಷಕರನ್ನು ಅಭಿನಂದನೆ ಸಲ್ಲಿಸಿದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಹಾಗೂ ಗೃಹರಕ್ಷಕದಳದ ಸಮಾದೇಷ್ಟರಾದ ಎಂ.ಎ.ನಟರಾಜ ಅವರು ಮಾತನಾಡಿ, ಕರ್ತವ್ಯದ ನಿಷ್ಟೆ ಮತ್ತು ಸಮಯ ಪಾಲನೆ ಮಾಡುತ್ತಾ ಪೋಲಿಸ್ ಇಲಾಖೆಯ ಸಿಬ್ಬಂದಿಯೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಬೀದರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಗೃಹರಕ್ಷಕದಳದ ಸಮಾದೇಷ್ಟರಾದ ಮಹೇಶ್ ಮೇಘಣ್ಣನವರ, ರಾಯಚೂರು ಜಿಲ್ಲೆಯ ಗೃಹರಕ್ಷಕದಳದ ಸಮಾದೇಷ್ಟರಾದ ಜಂಬಣ್ಣ, ಸಿವಿಲ್ ಡಿಫೆನ್ಸ್ನ ಮುಖ್ಯ ವಾರ್ಡನ್ ಎಂ.ಎ.ಶಕೀಬ್, ಭೋಧಕರಾದ ಬಸವರಾಜ್ ಹಗಳಗಾರ, ನಿವೃತ್ತ ಉಪ ಸಮಾದೇಷ್ಟ ಅಲ್ಲಾಬಕ್ಷಿ, ನಿವೃತ್ತ ಬೋಧಕ ಎನ್.ಎನ್.ಪಾಟೀಲ್, ನಿವೃತ್ತ ಉಪ ಸಮಾದೇಷ್ಟ ಚಂದ್ರಶೇಖರ್ ಭಡಗಲ್, ಶಂಕರ್ ರಾವ್, ಹೊಸಪೇಟೆ ಘಟಕಾಧಿಕಾರಿ ಎಸ್.ಎಂ.ಗಿರೀಶ್, ವಾಲ್ಯನಾಯ್ಕ್, ನಿವೃತ್ತ ಸೆಕೆಂಡ್ ಇನ್ ಕಮಾಂಡರ್ ಎನ್.ಎಸ್.ಲಕ್ಷ್ಮೀನರಸಿಂಹ, ಘಟಕಾಧಿಕಾರಿ ಜೆ.ಸುರೇಶ್, ಅಧಿಕಾರಿಗಳಾದ ಬಿ.ಕೆ.ಬಸವಲಿಂಗ, ಹೆಚ್.ಲಕ್ಷ್ಮೀನಾರಾಯಣ, ಗೋವಿಂದಪ್ಪ, ಪರಶುರಾಮ, ಸತ್ತಾರ್ ಸಾಬ್, ಪ್ರ.ದ.ಸ ಬಿ.ಎನ್.ಗೋಪಿನಾಥ ಸೇರಿದಂತೆ ಸಿಬ್ಬಂದಿಯವರು ಮತ್ತು 215 ಪುರುಷ ಮತ್ತು ಮಹಿಳಾ ಗೃಹರಕ್ಷಕರು ಭಾಗವಹಿಸಿದ್ದರು.
ವರದಿ. ವಿರೇಶ್. ಎಚ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030