ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾದ ಹಿನ್ನೆಲೆ ಡಿ ಬಾಸ್ ಫ್ಯಾನ್ಸ್ ವಾಹನ ಮೇಲಿನ ಸ್ಟಿಕರ್ ತೆರವಿಗೆ ಮುಂದಾದರು…!!!

Listen to this article

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾದ ಹಿನ್ನೆಲೆ ಡಿ ಬಾಸ್ ಫ್ಯಾನ್ಸ್ ಬೇಸರಗೊಂಡು ವಾಹನಗಳ ಮೇಲಿನ ಡಿ ಬಾಸ್ ಸ್ಟಿಕ್ಕರ್ ಕಿತ್ತು ಹಾಕುತ್ತಿರೋ ದೃಶ್ಯ ವೈರಲ್ ಆಗಿದೆ. ರೇಡಿಯಂ ಸ್ಟಿಕ್ಕರ್ ತೆಗೆದುಹಾಕಿ ಡಿ ಬಾಸ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಡಿ ಬಾಸ್ ಹೆಸರು ಸ್ಕ್ರ್ಯಾಚ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್, ಕಾರ್ ಗಳ ಮೇಲಿನ ಡಿ ಬಾಸ್ ಸ್ಟಿಕ್ಕರ್ ಗಳನ್ನ ಅಭಿಮಾನಿಗಳು ಕಿತ್ತು ಹಾಕ್ತಿದ್ದಾರೆ. ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಬೇಸರ ಉಂಟಾಗಿ ಡಿ ಬಾಸ್ ಹೆಸರನ್ನು ಚಾಕುವಿನಿಂದ ರಿಮೂವ್ ಮಾಡ್ತಿದ್ದಾರೆ.

ಬೆಂಗಳೂರಲ್ಲಿ ಆಟೋ ಚಾಲಕರ ಬಹುಪಾಲು ವಾಹನಗಳ ಮೇಲೆ ದರ್ಶನ್ ಅಭಿಮಾನ ರಾರಾಜಿಸುತ್ತಿರುತ್ತದೆ. ಡಿ ಬಾಸ್, ದಚ್ಚು, ದರ್ಶನ್, ಕರಿಯ ಎಂಬಿತ್ಯಾದಿ ಬರಹಗಳು ಸ್ಟಿಕ್ಕರ್ ಮಾಡಿ ಅಂಟಿಸಲಾಗಿರುತ್ತದೆ. ಇದೀಗ ಕೊಲೆ ಪ್ರಕರಣದಲ್ಲಿ ಬಂಧನವಾದ ಬಳಿಕ ಆಟೋ ಚಾಲಕರು, ಅಭಿಮಾನಿಗಳು ತಾವು ಅಭಿಮಾನದಿಂದ ಹಾಕಿರುವ ದರ್ಶನ್ ಸ್ಟಿಕ್ಕರ್‌ಗಳನ್ನು ತೆರವು ಮಾಡಲು ಮುಂದಾಗಿದ್ದಾರೆ…

ವರದಿ. ವಿ, ಸಾ, ವರದಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend