ದಾವಣಗೆರೆ ತುಮಕೂರು ನೇರ ರೈಲ್ವೆ ಮಾರ್ಗದ ಯೋಜನೆ ಪೂರ್ಣಗೊಳಿಸಲು ಒತ್ತು ನೀಡುತ್ತೇನೆಂದು ಸಂಸದ ಗೋವಿಂದ ಎಂ.ಕಾರಜೋಳ…!!!

Listen to this article

ಹೊಳಲ್ಕೆರೆ : ಭದ್ರ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ಹಣ ಬಿಡುಗಡೆ ಹಾಗೂ ದಾವಣಗೆರೆ ತುಮಕೂರು ನೇರ ರೈಲ್ವೆ ಮಾರ್ಗದ ಯೋಜನೆ ಪೂರ್ಣಗೊಳಿಸಲು ಒತ್ತು ನೀಡುತ್ತೇನೆಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ರಾಜ್ಯದ ಕುಮಾರಸ್ವಾಮಿ, ನಿರ್ಮಾಲ ಸೀತರಾಮ್, ವಿ.ಸೋಮಣ್ಣ ಮಂತ್ರಿಯಾಗಿದ್ದಾರೆ. ಭದ್ರ ಮೇಲ್ದಂಡ ಯೋಜನೆ ಪೂರ್ಣಗೊಳಿಸಿ ಚಿತ್ರದುರ್ಗ ಜಿಲ್ಲೆಯನ್ನು ನಿರಾವರಿಗೊಳಿಸಿ ಇಲ್ಲಿನ ರೈತರನ್ನು ಬರಗಾಲದಿಂದ ಮುಕ್ತಗೊಳಿಸುತ್ತೇನೆಂದರು.
ಈಗಾಗಲೆ ಪ್ರಸ್ತಾವನೆಯ ದಾವಣಗೆರೆ ತುಮಕೂರು ರೈಲು ಮಾರ್ಗ ಪೂರ್ಣಗೊಳಿಸಲು ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಶೀಲಿಸಿ ಯೋಜನೆಯನ್ನು ನಮ್ಮ ಅವಧಿಯಲ್ಲಿ ಪೂರ್ಣಗೊಳಿಸಲು ಒತ್ತು ನೀಡುತ್ತೇನೆ. ಚಿತ್ರದುರ್ಗ ಜಿಲ್ಲೆ ಜನರಿಗೆ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಜಲಜೀವನ್ ಮಿಷನ್ ಯೋಜನೆ ಕಲ್ಪಿಸಲು ಶೇ೫೦ ರಷ್ಟು ಹಣವನ್ನು ಕೇಂದ್ರ ಸರಕಾರದಿಂದ ಕೊಡಿಸುತ್ತೇನೆ. ಶೇ೫೦ರಷ್ಟು ಹಣವನ್ನು ರಾಜ್ಯ ಸರಕಾರ ಕೊಡಬೇಕೆಂದರು.
ಸರಕಾರ ಚುನಾವಣೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಜೆೆಬಿಗೆ ಕನ್ನಹಾಕಿದೆ. ರೈತರ ಬಿತ್ತನೆ ಬೀಜ, ದಿನಬಳಕೆ ಆಹಾರ ಪರ್ದಾಥಗಳ ಬೆಲೆ ಹೆಚ್ಚಿಸಿದೆ. ಇಂತಹ ಜನವಿರೋಧಿ ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪಕ್ಷ ರಾಜ್ಯದಲ್ಲಿ ಪ್ರತಿಭಟನೆ ನಡೆಸಲಿದೆ. ಎಲ್ಲಾ ಕಾರ್ಯಕರ್ತರು ಪಾಲ್ಗೊಳ್ಳುವಂತೆ ಕರೆ ನೀಡಿದರು. ಜನರು ನಮ್ಮ ಮೇಲೆ ಸಾಕಷ್ಟು ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ. ಅವರ ವಿಶ್ವಾಸಕ್ಕೆ ಚುತಿಯಾಗದಂತೆ ಕ್ಷೇತ್ರದ ಅಭಿವೃದ್ಧಿ ಶ್ರಮಿಸುತ್ತೇನೆಂದರು.
ಶಾಸಕ ಎಂ.ಚಂದ್ರಪ್ಪ, ಬಿಜೆಪಿ ಅಧ್ಯಕ್ಷ ಸಿದ್ದೇಶ್, ಜಿಲ್ಲಾಧ್ಯಕ್ಷ ಮುರುಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಬಂಗಾರಪ್ಪ, ಬಸವರಾಜ್, ಮಲ್ಲಿಕಾರ್ಜುನ್ ಮತ್ತೀತರರು ಇದ್ದರು.
ಪೋಟೋ :೧೬ಹೆಚ್.ಎಲ್.ಕೆ.೧ ಹೊಳಲ್ಕೆರೆ ನಡೆದ ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಗೋವಿಂದ ಎಂ.ಕಾರಜೋಳ ಇವರಿಗೆ ಅಭಿನಂದಿಸಿದ ಕಾರ್ಯಕರ್ತರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend