ಚಿಂತಾಮಣಿ ತಾಲೂಕಿನಲ್ಲಿ ಇಂದು ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ…!!!

Listen to this article

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಇಂದು ಸಂಜೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರು ಮತ್ತು ಅವರ ಸಂಘಟನೆಯ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕರೆಂಟ್ ಇಲ್ಲ ಒಂದು ಯುಪಿಎಸ್ ಇಲ್ಲ ಎಲ್ಲ ರೋಗಿಗಳು ಕತ್ತಲೆ ಕೋಣೆಗಳಲ್ಲಿ ಕೂತಿರುವುದನ್ನು ಕಂಡು. ಮತ್ತು ಅಲ್ಲಿನ ಸಿಬ್ಬಂದಿಗಳ ಜೊತೆ ಮಾತುಕತೆ ನಡೆದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗಳು ಕರೆಂಟ್ ಇಲ್ಲ ನಾವೇನು ಮಾಡ್ಲಿ. ಎಂಬ ಬೇಜಾಬ್ದಾರೀ ಹಾಗು ತಿರಸ್ಕಾರ ದಿಂದ ಉತಾರಸಿರುತಾರೆ . ಚಿಕಿತ್ಸೆ ಕೊಡಿ ಎಂದು ಕೇಳಿದಾಗ ಡಾಕ್ಟರ್ ಇಲ್ಲ ಡಾಕ್ಟರ್ ಬರಲಿ ಕೊಡುತ್ತೇವೆ ಎಂದುಉತ್ತರಿಸುತ್ತಾರೆ. ಇದನ್ನು ಕಂಡ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದವರು ಜಿಲ್ಲಾಧ್ಯಕ್ಷರಾದ ಅಗ್ರಹಾರ ಮೋಹನ್ ರವರ ನೇತೃತ್ವದಲ್ಲಿ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯ ಮುಂದೆ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಆಸ್ಪತ್ರೆ ಆಡಳಿತ ಅಧಿಕಾರಿಗಳ ಮೇಲೆ ಆಸ್ಪತ್ರೆ ಕಾರ್ಯನಿರ್ತಿರಾದ ಡಾಕ್ಟರ್ ಮೇಲೆ ಧರಣಿಯನ್ನು ಪ್ರಾರಂಭಿಸುತ್ತಾರೆ.ಧರಣಿಯನ್ನು ಪ್ರಾರಂಭಿಸಿದ ಕೆಲವು ಕ್ಷಣಗಳಲ್ಲಿ ಆಡಳಿತ ಸಿಬ್ಬಂದಿಗಳು ಬಂದು ರೋಗಿಗಳಿಗೆ ಚಿಕಿತ್ಸೆ ನೀಡಿ .ಇನ್ನು ಮುಂದೆ ಈ ರೀತಿ ಆಗದ ಥರ ನೋಡಿಕೊಳ್ಳುತೇವೆ ಎಂದು ಕ್ಷಮೆ ಕೇಳಿರುತಾರೆ … ಜಿಲ್ಲಾಧ್ಯಕ್ಷರ ಅಗ್ರಹಾರ ಮೋಹನ್ ರವರು ಮಾತನಾಡಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅದು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ಗಮನಹರಿಸಿ ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಕೊಡದೆ ಇದ್ದರೆ. ನಾವು ಸಚಿವರ ವಿರುದ್ಧ ಆಸ್ಪತ್ರೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇನೆ ಎಂದು ನುಡಿದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳಾದ ಅಪ್ಪುರವರು.ರಘರವರು ಧನಂಜಯ್ ಚಾರಿ.. ನಾರಾಯಣಸ್ವಾಮಿ…. ಶ್ರೀನಿವಾಸ್..ಅನಿಲ್, ವೆಂಟರಾವಣ,ಸುನಿಲ ಇನ್ನು ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು…..

 

ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend