ಚಳ್ಳಕೆರೆ ನಗರದ ನಿರ್ಮಲಾ ಲಾಡ್ಜ್ ಹಿಂಭಾಗದ ಮನೆಯಲ್ಲಿ ಶನಿವಾರ ರಾತ್ರಿ ದರೋಡೆ.
ಚಳ್ಳಕೆರೆಯ ಬೆಂಗಳೂರು ರಸ್ತೆಯ ನಿರ್ಮಲಾ ಲಾಡ್ಜ್ ಹಿಂಭಾಗದ ಮನೆಗೆ ನುಗ್ಗಿದ ಕಳ್ಳರು ಗಂಡ ಈರಣ್ಣನನ್ನು ನೆಲಕ್ಕೆ ತುಳಿದರೆ ಹೆಂಡತಿ ರಾಧಳ ಕೊರಳಿನಲ್ಲಿದ್ದ ಮಾಂಗಲ್ಯ ಸರ ನೀಡಲು ನಿರಾಕರಿಸಿದ್ದಕ್ಕೆ ಮುಖ ಹಾಗೂ ಕಾಲಿಗೆ ಚುಚ್ಚಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದಾಗ ಕೊಳಲ್ಲಿದ್ದ ಮಾಂಗಲ್ಯ ನೀಡಿದ್ದು ಅದರಲ್ಲಿದ್ದ ಮಾಂಗಲ್ಯವನ್ನು ಕಳ್ಳರು ವಾಪಸ್ ನೀಡಿದ್ದಾರೆ. ಮನೆಯಲ್ಲಿದ್ದ ಒಡೆವೆ ಹಣ ನೀವಾಗಿ ಕೊಟ್ಟರೆ ಸರಿ ಇಲ್ಲವಾದಲ್ಲಿ ಪ್ರಾಣ ತೆಗೆಯುವುದಾಗಿ ಹೇಳಿದ್ದಾರೆ. ಮನೆಯಲ್ಲಿದ್ದ ಕಳ್ಳರು ಒಡವೆ ಹಣ ದೋಚಿಕೊಂಡು ಹೋಗುವಾಗ ಪೊಲೀಸರಿಗೆ ಮಾಹಿತಿ ನೀಡಿದರೆ ಮತ್ತೆ ಬಂದು ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದರಿಂದ ದಂಪತಿಗಳಿಬ್ಬರು ಮಾನಸಿಕವಾಗಿ ನೊಂದಿದ್ದಾರೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿಗಳ ಬಳಿ ಎಸ್ಪಿ ಧರ್ಮೇಂದ್ರ ಮೀನಾ ಭೇಟಿ ನೀಡಿ ಘಟನೆಯ ವಿವಿವರವನ್ನು ಪಡೆದಿದ್ದು ನೀವು ಯಾವುದೇ ಆತಂಕಕ್ಕೊಳಗಾಬೇಡಿ ದೈರ್ಯವಾಗಿ ಚಿಕಿತ್ಸೆ ಪಡೆಯಿರಿ ಅಗತ್ಯ ರಕ್ಷಣೆ ನೀಡಲಾಗುವುದು ಅತಿಶೀಘ್ರದಲ್ಲಿ ಕಳ್ಳರನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಈಗಾಗಲೆ ಕಳ್ಳರನ್ನು ಪತ್ತೆ ಮಾಡಲು ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದ್ದು ನಗರದಲ್ಲಿ ರಾತ್ರಿ ಗಸ್ತು ಹೆಚ್ಚಿಸಲಾಗುವುದು ಅತಿ ಜರರೂ ನಗರದಲ್ಲಿ ಸಿ ಸಿ ಕ್ಯಾಮರ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಿಕ್ಷಕ ಈರಣ್ಣ ಮನೆಯಲ್ಲಿ ಕಳ್ಳರು ದೋಚಿದ ವಿವರ ಸುಮಾರು 8 ಗ್ರಾಂ ತೂಕದ ಬಂಗಾರದ ಉಂಗುರ, ಸುಮಾರು 40 ಗ್ರಾಮ ತೂಕದ ಮಾಂಗಲ್ಯ ಸರ
ಸುಮಾರು 3 ಗ್ರಾಂ ತೂಕದ ಉಂಗುರ ಸುಮಾರು 3 ಗ್ರಾಂ ತೂಕದ ಬಂಗಾರದ ಕಿವಿಯೊಳೆ. ಸುಮಾರು 7 ಗ್ರಾಂ ತೂಕದ ರಿವರ್ಸ್, ಸುಮಾರು 10 ಗ್ರಾಂ ತೂಕದ ಜುಮುಕಿ, ಬೆಂಡೋಲೆ,
. ಸುಮಾರು 6 ಗ್ರಾಂ ತೂಕದ ಟ್ ಗುಂಡು, ಸುಮಾರು 2 ಗ್ರಾಂ ತೂಕದ ಗಣೇಶನ ಡಾಲರ್,
ಮೇಲಿನ ಬಂಗಾರದ ವಡವೆಗಳ ಅಂದಾಜು ಬೆಲೆ 3,50,000/- ರೂ
, ಸುಮಾರು 200 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ದೀಪ ಸುಮಾರು 50 ತೂಕದ ಬೆಳ್ಳಿ
ಕುಂಕುಮ ಬಟ್ಟಲು, ಈ ಬೆಳ್ಳಿ ವಡವೆಗಳ ಅಂದಾಜು ಬೆಲೆ 20 ಸಾವಿರ ರೂ 25000/ ರೂ ನಗದು ಹಣ ಸೇರಿದಂತೆ ಒಟ್ಟು ಸುಮಾರು 6 ಲಕ್ಷರೂ ಎನ್ನಲಾಗಿದೆ ಕಳ್ಳರು ದೋಚಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ. ಸಾರ್ವಜನಿಕಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಳಕ್ಕೆ ಬಿಇಒಸುರೇಶ್ ಸೇರಿದಂತೆ ಶಿಕ್ಷರು ಉಪ್ಪಾರಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಿಂದ ಜನರು ಬಂದು ನೋಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು…
ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030