ಭೀಮಸಮುದ್ರ: ಶ್ರೀ ವೀರಭದ್ರೇಶ್ವರಸ್ವಾಮಿ ಜಯಂತಿ ಆಚರಣೆಗೆ ಕರೆ
ಗುಡೇಕೋಟೆ:- ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಭೀಮಸಮುದ್ರ ಗ್ರಾಮದಲ್ಲಿ ದಿನಾಂಕ 03/9/2024 ರಂದು ನಡೆಯುವ ನಮ್ಮ ವಿಜಯನಗರ ಜಿಲ್ಲೆಯ ಪ್ರತಿ ಮನೆಗಳಲ್ಲಿ ವೀರಭದ್ರೇಶ್ವರ ಜಯಂತಿ ಆಚರಣೆ ಮಾಡಲು ಕರ್ನಾಟಕ ವೀರಶೈವ ಲಿಂಗಾಯಿತ ಸಂಘಟನೆ ವೇದಿಕೆಯ ಕೂಡ್ಲಿಗಿ ತಾಲೂಕು ಸಂಚಾಲಕರಾದ ಅಂಗಡಿ ಶಶಿಕುಮಾರ್ ಕರೆ ನೀಡಿದ್ದಾರೆ ಈ ಕುರಿತು ಪತ್ರಿಕ ಪ್ರಕಟಣೆ ನೀಡಿರುವ ಅವರು ಸನಾತನ ಧರ್ಮದಲ್ಲಿ 33 ಕೋಟಿ ದೇವರುಗಳಿದ್ದು ಒಂದೊಂದು ಕಾಲಘಟ್ಟದಲ್ಲಿ ನಡೆಯುವ ಅನ್ಯಾಯ ಅಧರ್ಮ ಅನೀತಿಗಳನ್ನು ತಡೆಯಲು ದುಷ್ಟರನ್ನು ಶಿಕ್ಷಿಸಲು ಹಾಗೂ ಸಿಸ್ಟರನ್ನು ರಕ್ಷಿಸಲು ದೇವತೆಗಳು ಒಂದಲ್ಲ ಒಂದು ಅವತಾರವನ್ನು ತಾಳುವುದು ನಮಗೆ ತಿಳಿದಿರುವ ವಿಷಯ ವಂತಾಗಿದೆ ಒಂದು ಆ ಮಹಾದೇವನ ಬೋಳ ಶಂಕರನ ಅವತಾರವಾದ ವೀರಭದ್ರನನ್ನು ದಕ್ಷ ಬ್ರಹ್ಮಣ ಸಂಹಾರಕ್ಕಾಗಿ ಮತ್ತು ಶೈವ ಪರಂಪರೆಯ ಮಹತ್ವವನ್ನು ಹಿಡಿ ವಿಶ್ವಕ್ಕೆ ಸಾರುವ ಸಲುವಾಗಿ ಜನ್ಮತಾಳಿದನು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಈ ವರ್ಷವೂ ಪ್ರತಿ ಗ್ರಾಮದ ಮನೆಮನೆಗಳಲ್ಲಿ ವೀರಭದ್ರೇಶ್ವರನ ಜಯಂತಿಯನ್ನು ಆಚರಿಸಿ ಪ್ರತಿಯೊಬ್ಬರು ಸಹ ವಿರಭದ್ರೇಶ್ವರನ ಕೃಪೆಗೆ ಪಾತ್ರರಾಗಿ ಸಕಲ ಇಷ್ಟಾರ್ಥಗಳನ್ನು ಪಡೆಯಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರ ಅಧ್ಯಕ್ಷರಾದ ಪ್ರದೀಪ್ ಕಂಕನವಾಡಿ ತಾಲೂಕು ಸಂಚಾಲಕರಾದ ಅಂಗಡಿ ಶಶಿಕುಮಾರ್ ಕರೆ ನೀಡಿದ್ದಾರೆ…
ವರದಿ. ಶಿವಕುಮಾರ್, ಗುಡೇಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030