ನ.19 ರಂದು ಜಿಲ್ಲಾಧಿಕಾರಿಗಳಿಂದ ಬಸಾಪಟ್ಟಣದಲ್ಲಿ ಗ್ರಾಮ ವಾಸ್ತವ್ಯ
ಕೊಪ್ಪಳ, : ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರು ನವೆಂಬರ್ 19 ರಂದು ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಹೋಬಳಿಯ ಬಸಾಪಟ್ಟಣದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಅದರಂತೆ ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದಾರ ಅವರು ತಾಲ್ಲೂಕಿನ ಕೊಪ್ಪಳ ಹೋಬಳಿಯ ಹೊರತಟ್ನಾಳ ಗ್ರಾಮದಲ್ಲಿ, ಕುಕನೂರು ತಹಶೀಲ್ದಾರ ಚಿದಾನಂದ ಗುರುಸ್ವಾಮಿ ಅವರು ತಾಲ್ಲೂಕಿನ ಕುಕನೂರು ಹೋಬಳಿಯ ಮನ್ನಾಪುರ ಗ್ರಾಮದಲ್ಲಿ, ಕುಷ್ಟಗಿ ತಹಶೀಲ್ದಾರ ಗುರುರಾಜ ಎಂ.ಚಲವಾದಿ ಅವರು ತಾಲ್ಲೂಕಿನ ಹನುಮನಾಳ ಹೋಬಳಿಯ ಬಾದಿಮನಾಳ ಗ್ರಾಮದಲ್ಲಿ, ಕಾರಟಗಿ ತಹಶೀಲ್ದಾರ ಎಂ.ಬಸವರಾಜ ಅವರು ತಾಲ್ಲೂಕಿನ ಕಾರಟಗಿ ಹೋಬಳಿಯ ಸೋಮನಾಳ ಗ್ರಾಮದಲ್ಲಿ, ಯಲಬುರ್ಗಾ ತಹಶೀಲ್ದಾರ ಶ್ರೀಶೈಲ ತಳವಾರ ಅವರು ತಾಲ್ಲೂಕಿನ ಹಿರೇವಂಕಲಕುಂಟ ಹೋಬಳಿಯ ಬುಡಕುಂಟಿ ಗ್ರಾಮದಲ್ಲಿ, ಕನಕಗಿರಿ ತಹಶೀಲ್ದಾರ ಧನಂಜಯ ಎಂ. ಅವರು ತಾಲ್ಲೂಕಿನ ನವಲಿ ಹೋಬಳಿಯ ಕ್ಯಾರಿಹಾಳ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ…
ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030