ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.)ನೊಂದಣಿ ಸಂಖ್ಯೆ:DRB4/SOR/52/2022-23 ಈ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಇವರ ನೇತೃತ್ವದಲ್ಲಿ ಇಂದು ದಿನಾಂಕ 27-6-22 ಸೋಮವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೂಡ್ಲಿಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.)ಸಂಘ ರಚನೆಯಾಯಿತು ತಾಲೂಕು ಅಧ್ಯಕ್ಷರಾಗಿ ಎಲೆ ನಾಗರಾಜ ಇವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು ಹಾಗೂ ಕಾರ್ಯಾಧ್ಯಕ್ಷರಾಗಿ ಡಿ.ಎಂ. ಈಶ್ವರಪ್ಪ ಮತ್ತು ಉಪಾಧ್ಯಕ್ಷರುಗಳಾಗಿ ಬಾಣದ ಶಿವಮೂರ್ತಿ, ಅನಿಲ್ ಕುಮಾರ್, ಮೀನಕೆರೆ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಸಾಲುಮನಿ ಮತ್ತು ಸಹ ಕಾರ್ಯದರ್ಶಿಗಳಾಗಿ ಟಿ.ವೆಂಕಟೇಶ್, ತಿಪ್ಪೇಶ್ ಇವರುಗಳು ಆಯ್ಕೆಯಾದರು ಇನ್ನುಳಿದವರು ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ ಆಯ್ಕೆಯಾದರು, ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರು ಮಾತನಾಡಿ ಪತ್ರಕರ್ತರ ಧ್ವನಿಯಾಗಿ ಹಾಗೂ ಸಾಮಾಜಿಕ ಕಳಕಳಿಯಿಂದ ಕಾರ್ಯನಿರತ ಧ್ವನಿ ಪತ್ರಕರ್ತರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಹಾಗೂ ಪತ್ರಕರ್ತರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಮತ್ತು ವಾರ್ತಾ ಇಲಾಖೆಯಿಂದ ಕೊಡಮಾಡುವ ಆಯುಷ್ಮಾನ್ ಕಾರ್ಡುಗಳನ್ನು ಶೀಘ್ರದಲ್ಲೇ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು…
ವರದಿ. ಬಸಪ್ಪ. ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030