ಕೂಡ್ಲಿಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ದಿ; 03-10-2024 ರಂದು ಹೆಸರಾಂತ ಮಹಡಿ ಸೀನಣ್ಣನ ಮೊಮ್ಮಗಳು ಹಾಗೂ ಶ್ರೀಮತಿ ನಿಧಿ – ಮಣಿಕಂಠ ಅವರ ಮುದ್ದಿನ ಮಗಳ ನಾಮಕರಣ ಕಾರ್ಯಕ್ರಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಾಲ್ಗೊಂಡು ಆ ಭಗವಂತನ ಕೃಪೆಯಿಂದ ನೂರು ವರ್ಷಗಳ ಕಾಲ ಮಗಳು ಅನನ್ಯವಾಗಿ ಬಾಳಲಿ ಎಂದೂ ಶುಭಾ ಹಾರೈಸಿದರು. ಶಾಸಕರು, ಇದೇ ವೇಳೆ ಮಹಡಿ ಸೀನಣ್ಣನ ಕುಟುಂಬದ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗುರುಸಿದ್ಧನ ಗೌಡ ಅವರು, ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಪ.ಪಂ. ಸದಸ್ಯರಾದ ಪೂರಿಯಾ ನಾಯಕ್, ಕಾಂಗ್ರೆಸ್ ವಕ್ತಾರ ಜಿಲಾನ್, ಮುಖಂಡರಾದ ಉದಯ ಜನ್ನು, ಮಲ್ಲಿಕಾರ್ಜುನ ಗೌಡ, ಡಾಣಿ ರಾಘವೇಂದ್ರ ಅವರು ಉಪಸ್ಥಿತರಿದ್ದರು..
ವರದಿ. ಅನಿಲ್ ಕುಮಾರ್, ಹುಲಿಕುಂಟೆ, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030