ಕೂಡ್ಲಿಗಿ ವರದಿ
ಕೂಡ್ಲಿಗಿ ತಾಲೂಕು ವೀರಶೈವ ಜಂಗಮ ಸಮಾಜ ವತಿಯಿಂದ ಈ ದಿನದಂದು ತಾಲೂಕು ನಿಲ್ಲಿಸಿ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು
ನಮ್ಮದಲ್ಲದ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ನಿಲ್ಲಿಸಿ ವೀರಶೈವ ಜಂಗಮ ಜಾತಿ ಪ್ರಮಾಣ ಪತ್ರ ನೀಡುವ ಕುರಿತು.
ಆಯುಕ್ತರ ಗಮನಕ್ಕೆ ತಿಳಿಯ ಬಯಸುವುದೇನೆಂದರೇ ಜಂಗಮ ಸಮಾಜದವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ‘ಸಲ್ಲಿಸಿದಾಗ ನಮ್ಮದಲ್ಲದ ವೀರಶೈವ ಲಿಂಗಾಯತ ಜಾತಿ ಎಂದು ನಮೂದಿಸಿ ಕೊಡುತ್ತಿದ್ದಾರೆ – ನಾವು ವೀರಶೈವ ಪಂಥದಲ್ಲಿ ಬರುತ್ತೇವೆ ಆದರೆ ಲಿಂಗಾಯಿತರಲ್ಲ.
ಈಗಾಗಲೇ ನಮ್ಮ ಮತ್ತು ನಮ್ಮ ಹಿರಿಯರ ಶಾಲಾ ವರ್ಗವಣೆ ಪತ್ರಗಳಲ್ಲಿ ವೀರಶೈವ ಜಂಗಮ ಎಂದು ನಮೂದಾಗಿದ್ದು.
ಈ ತರಹದ ಪ್ರಮಾಣ ಪತ್ರಗಳನ್ನು ಪಡೆಯುತ್ತಿರುವುದರಿಂದ ನಮಗೆ ಸರ್ಕಾರಿ ಕೆಲಸಗಳನ್ನು ಪಡೆಯುವಾಗ ತೊಂದರೆ ಆಗುತ್ತಿದೆ. ನಾವುಗಳು ಜಾತಿಯಲ್ಲಿ – ಜಂಗಮರಾಗಿದ್ದು ನಮ್ಮ ಮತ್ತು ಲಿಂಗಾಯಿತರ ಆಚಾರ ವಿಚಾರಗಳಲ್ಲಿ ಬಹಳ ವ್ಯತ್ಯಾಸಗಳಿದ್ದು ನಾವು ವೀರಶೈವ ಲಿಂಗಾಯಿತ ಜಾತಿಗೆ ಸೇರಿರುವುದಿಲ್ಲ. ನಮ್ಮ ಜಾತಿ ಬಹಳ ಹಿಂದುಳಿದ ವರ್ಗವಾಗಿದ್ದು ಭವಿಷ್ಯದಲ್ಲಿ ನಮ್ಮ ಮಕ್ಕಳು ಇನ್ನು ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ ಆದ್ದರಿಂದ ತತ್ ಕ್ಷಣದಿಂದ ನಮ್ಮದಲ್ಲದ ವೀರಶೈವ ಲಿಂಗಾಯಿತ ಎಂದು ನಮೂದಿಸುವುದನ್ನು ನಿಲ್ಲಿಸಿ ನಮ್ಮ ನೈಜ ಜಾತಿ ವೀರಶೈವ ಜಂಗಮ ಎಂದು ನಮೂದಿಸಿಕೊಡಬೇಕೆಂದು ತಾಲೂಕು ಜಂಗಮ ಸಮಾಜ ಸಂಸ್ಥೆ ಕೂಡ್ಲಿಗಿ ಇವರು ತಮ್ಮಲ್ಲಿ ಕೇಳಿಕೊಳ್ಳುತೇನೆ ಎಂದು ತಿಳಿಸಿದರು…
ವರದಿ, ವೈ,ಮಹದೇವ್ ಕೂಡ್ಲಿಗಿ ಗ್ರಾಮಾಂತರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030