ಕೂಡ್ಲಿಗಿ:ಗಾಂಧೀಜಿ ಜಯಂತಿ_ಚಿತಾ ಭಸ್ಮ ಸ್ಮಾರಕಕ್ಕೆ ಗೌರವ ಸಮರ್ಪಿಸಿದ- ಶಾಸಕ ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಮಹಾತ್ಮ ಗಾಂಧೀಜಿ ಚಿತಾ ಭಸ್ಮ ರಾಷ್ಟ್ರೀಯ ಸ್ಮಾರಕದಲ್ಲಿ, ಅ2 ರಂದು ತಾಲೂಕಾಡಳಿತ ಹಾಗೂ ಗಾಂಧೀ ಸ್ಮಾರಕ ಸಮಿತಿ ಸಹಯೋಗದಲ್ಲಿ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ155ನೇ ಜನ್ಮ ದಿನ, ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ120ನೇ ಜನ್ಮ ದಿನವನ್ನು ಆಚರಿಸಲಾಯಿತು. ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಮಹಾತ್ಮ ಗಾಂದೀಜಿಯವರ ಭಾವಚಿತ್ರಕ್ಕೆ ಹಾಗೂ ಚಿತಾಭಸ್ಮಕ್ಕೆ. ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ, ಪುಷ್ಪಗುಚ್ಚ ಅರ್ಪಿಸಿ ನಮಿಸುವ ಮೂಲಕ ಗೌರವ ಸರ್ಪಿಸಿದರು.
ಈ ಸಂದರ್ಭದಲ್ಲಿ, ತಹಶಿಲ್ದಾರರಾದ ಎಮ್.ರೇಣುಕಮ್ಮ ಸೇರಿದಂತೆ. ತಾಲೂಕಿನ ವಿವಿದ ಇಲಾಖೆಗಳ ಅಧಿಕಾರಿಗಳು, ಹಾಗೂ ಸಿಬ್ಬಂದಿಯವರು ಹಾಜರಿದ್ದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ, ಪಪಂ ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು, ಹಾಗೂ ವಿವಿದ ವಾರ್ಡ್ ಗಳ ಸದಸ್ಯರು ಮತ್ತು ಪಪಂ ಅಧಿಕಾ ರಿಗಳು ಸಿಬ್ಬಂದಿಯವರು. ವಿವಿದ ಜನಪ್ರತಿನಿಧಿಗಳು, ಗಾಂದೀಜಿ ಸ್ಮಾರಕ ಸಮಿತಿ ಪ್ರಮುಖರಾದ ನಿವೃತ್ತ ದೈಹಿಕ ಶಿಕ್ಷಕರಾದ ಡಿ.ನಾಗರಾಜಪ್ಪ ಸೇರಿದಂತೆ, ಸಮಿತಿ ಪದಾಧಿಕಾರಿಗಳು ಸದಸ್ಯರು. ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು. ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಸೇರಿದಂತೆ, ವವಿವಿದ ಶಾಲಾ ಕಾಲೇಜುಗಳ ಭೋದಕ ವರ್ಗ ಹಾಗೂ ಭೋದಕೇತರ ವರ್ಗದವರು. ನೌಕರರ ಸಂಘದವರು ನಿವೃತ್ತ ನೌಕರರ ಸಂಘದವರು. ಪತ್ರಕರ್ತರು, ನಾಗರೀಕರು. ವಿವಿದ ಸಮುದಾಯಗಳ ಹಿರಿಯ ಮುಖಂಡರು, ರೈತರು ಕಾರ್ಮಿಕರು ಮಹಿಳಾ ಸಂಘಟನೆಗಳ ಪ್ರಮುಖರು. ವಿವಿದ ಪಕ್ಷಗಳ ಪ್ರಮುಖರು, ವಿವಿದ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ಅಖಿಲ ಭಾರತ ಕಾಂಗ್ರೇಸ್ ಅಧಿವೇಶನಕ್ಕೆ ಶತಮಾನೋತ್ಸವ -ಗಾಂಧೀ ನಡಿಗೆ.. 1924ರ ಅಖಿಲ ಭಾರತ ಕಾಂಗ್ರೇಸ್ ಸಮಿತಿ, ಪ್ರಥಮ ಅಧಿವೇಶನ ಜರುಗಿ ಈಗ್ಗೆ ನೂರು ವರ್ಷಗಳು ಸಂದಿವೆ. ಪ್ರಯಕ್ತ ಕಾಂಗ್ರೇಸ್ ಪಕ್ಷ ರಾಷ್ಟ್ರಾಧ್ಯಂತ ಶತಮಾನೋತ್ಸವ ಸಂಭ್ರಮಾಚರಣೆ ಆಚರಿಸಿತು, ಕಾರ್ಯಕರ್ತರು ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ ಸಂಭ್ರಮಾಚರಣೆ ಆಚರಿಸಿದರು. ಈ ಹಿನ್ನಲೆಯಲ್ಲಿ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ನೇತೃತ್ವದಲ್ಲಿ “ಗಾಂಧೀ ನಡಿಗೆ” ಹೆಸರಲ್ಲಿ, ಪಟ್ಟಣದಲ್ಲಿ ಪಾದಯಾತ್ರೆ ಜಾಥಾ ನಡೆಸಲಾಯಿತು. ಪಕ್ಷದ ಮುಖಂಡರು ಕಾರ್ಯಕರ್ತರು, ಪಕ್ಷದ ಜಿಲ್ಲೆ ತಾಲೂಕು ಗ್ರಾಮೀಣ ಭಾಗಗಳ ಕಾರ್ಯಕರ್ತರು. ಕಾರ್ಮಿಕರ ಯುವಕರ ಘಟಕ, ಮಹಿಳಾ ಘಟಕಗಳು ಸೇರಿದಂತೆಗಳ ವಿವಿದ ಘಟಕಗಳ ಪದಾಧಿಕಾರಿಗಳು ಸದಸ್ಯರು. ಪಕ್ಷದ ವಿವಿದ ಜನಪ್ರತಿನಿಧಿಗಳು, ಹಾಗೂ ಪಕ್ಷದ ಹಿರಿಯರು ಭಾಗಿಯಾಗಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030