ಶಾಸಕನೆಂಬ ಅಹಂ ಇಲ್ಲದೇ, ಪರಿಸ್ಥಿತಿಗಳನ್ನು ಗುರುತಿಸಿ ಪ್ರೀತಿಯಿಂದ ಕೆಲಸ ತರುತ್ತೇನೆ – ಶಾಸಕ ಡಾ.‌ ಶ್ರೀನಿವಾಸ್. ಎನ್. ಟಿ…!!!

Listen to this article

ಶಾಸಕನೆಂಬ ಅಹಂ ಇಲ್ಲದೇ, ಪರಿಸ್ಥಿತಿಗಳನ್ನು ಗುರುತಿಸಿ ಪ್ರೀತಿಯಿಂದ ಕೆಲಸ ತರುತ್ತೇನೆ – ಶಾಸಕ ಡಾ.‌ ಶ್ರೀನಿವಾಸ್. ಎನ್. ಟಿ.

ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರದಲ್ಲಿ ಸಿ. ಸಿ. ರಸ್ತೆ ಮತ್ತು ಪೇವಸ್೯ ನಿರ್ಮಾಣದ ಭೂಮಿಪೂಜೆಯನ್ನು ದಿ;11-09-24 ರಂದು ಮಾನ್ಯಶಾಸಕರಾದ ಡಾ.‌ ಶ್ರೀನಿವಾಸ್. ಎನ್. ಟಿ. ಅವರು ನೆರವೇರಿಸಿ ಮಾತನಾಡಿ, ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಮಾನ್ಯ ಶ್ರೀ ಸಿರಾಜ್ ಶೇಖ್ ರವರು ನಮ್ಮಲ್ಲಿ ಒಂದು ಮಾದರಿ ನಗರವನ್ನು ನಿರ್ಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವೆ. ನಮ್ಮ ಕ್ಷೇತ್ರದ ಪರಿಸ್ಥಿತಿಗಳು, ಸಮಸ್ಯೆಗಳು ಮತ್ತು ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ರಾಜೀವ್ ಗಾಂಧಿ ನಗರದಲ್ಲಿ ಸಿ. ಸಿ‌. ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಚ್ಚುಕಟ್ಟಾಗಿ ನಿರ್ಮಿಸುವೆ ಎಂದರು. ಒಟ್ಟಿನಲ್ಲಿ
ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮವಹಿಸಿ ದುಡಿಯುವೆ ಎಂದೂ ಹೇಳಿದರು. ‌ಈ ವೇಳೆ ಅಧಿಕಾರಿಗಳು, ಗುತ್ತಿಗೆದಾರರು, ಪ. ಪಂ.‌ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ, ರಾಜೀವ್ ಗಾಂಧಿ ನಗರದ ಪ.‌ ಪಂ‌. ಸದಸ್ಯರಾದ ಕೆ. ಈಶಪ್ಪ, ಹಾಗೂ ಇತರ ಪ.ಪಂ. ಸದಸ್ಯರು, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ದನ ಗೌಡ, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend