ಕೂಡ್ಲಿಗಿ:ಹೀಗೂ ಉಂಟು.!?

Listen to this article

ಕೂಡ್ಲಿಗಿ:ಹೀಗೂ ಉಂಟು.!?-ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಆಜಾದ್ ನಗರದವಾಸಿಗಳು, ಶಿಳ್ಳೇಕ್ಯಾತ ಸಮುದಾಯದ ಮಹಿಳಾ ಮುಖಂಡರಾದ. ಹಣ್ಣಿನ ವ್ಯಾಪಾರಿಗಳಾದ ಗೌರಮ್ಮ ಶಿಂಧೆಯವರ ಮನೆಯಲ್ಲಿ, ಪರಿಸರ ಸ್ನೇಹಿ ಮೈದಾ ಹಿಟ್ಟಿನ ಗಣಪ ಪ್ರತಿಷ್ಠಾಸಿ ಆರಾಧಿಸಲಾಯಿತು. ವಿಶೇಷವೆಂದರೆ ಈ ಪುಟ್ಟ ಬಾಲಗಣಪ ಮೂರ್ತಿಯನ್ನು, ಗೌರಮ್ಮರವರ ಮೊಮ್ಮಕ್ಕಳು ಹಿಟ್ಟಿನಿಂದ ತಯಾರಿಸಿದ್ದಾರೆ. ಅವರೇ ಮೈದಾ ಹಿಟ್ಟಿನಿಂದ ತಯಾರಿಸಿದ ಗಣಪ ಮೂರ್ತಿಗೆ, ಪರಿಸರ ಸ್ನೇಹಿ ಬಣ್ಣ ಹಾಗೂ ಅಲಂಕಾರ ಸಾಮಾಗ್ರಿಗಳನ್ನ ಬಳಸಿ ಅಂತಿಮ ಸ್ಪರ್ಶ ನೀಡಲಾಗಿತ್ತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ, ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಆಧುನಿಕ ಭರಾಟೆಯಲ್ಲಿ ಪಿಒಪಿ ಗಣಪಗಳ ಅಬ್ಬರದಲ್ಲಿ, ಅತ್ಯಂತ ಸರಳ ಹಾಗೂ ಪರಿಸರ ಸ್ನೇಹಿ ಗಣಪವನ್ನು ಪ್ರತಿಷ್ಠಾಪಿಸಿದ್ದು. ಮಕ್ಕಳಪರಿಸರ ಹಾಗೂ ಧಾರ್ಮಿಕ ಪ್ರಜ್ಞೆ ಆದರ್ಶನೀಯ ಅನುಕರಣೀಯವಾಗಿದೆ, ಅದಕ್ಕಾಗಿ ಪಟ್ಟಣದ ಧಾರ್ಮಿಕ ಶ್ರದ್ಧಾವಂತರು ಆಸ್ಥಿಕರು ನಾಗರೀಕರು ಪ್ರಜ್ಞಾವಂತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ,ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend