ಕಲಾಭಾರತಿ ಕಲಾ ಸಂಘ ಅಧ್ಯಕ್ಷರಿಂದ ಎನ್ಟಿ ಶ್ರೀನಿವಾಸ್ ಶಾಸಕರಿಗೆ ಸನ್ಮಾನ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವೀರನಗೌಡ ಇವರ ಮನೆಯಲ್ಲಿ ಕಲಾಭಾರತಿ ಕಲಾ ಸಂಘದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಬಣಕಾರ್ ಮೂಗಪ್ಪ ಹಿರೇ ಹೆಗ್ಡಾಳ್ ದಿನಾಂಕ 25.08.2024 ರಂದು ತಾಲೂಕಿಗೆ ಒಂದು ಕಾರ್ಯಕ್ರಮ ಸಾಂಸ್ಕೃತಿಕ ಕಲೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 110 ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಲೋತ್ಸವ ಸ್ಥಳ ಗುರುಭವನ ಸಂಡೂರು ಡಾ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಶರಣ ಬಸವ ಮಹಾಸ್ವಾಮಿಗಳು ತಳ್ಳಿಯಾಳ ಸಂಸ್ಥಾನ ಕೋಡಿಮಠ ಗಜೇಂದ್ರಗಡ ಗದಗ ಜಿಲ್ಲೆ ಇವರ ಸಾನಿಧ್ಯದಲ್ಲಿ ಅದ್ದೂರಿಯಾಗಿ ನಡೆದ ಕಾರ್ಯಕ್ರಮ ಎಲ್ಲರ ಸಾಧಕರ ಅಚ್ಚುಮೆಚ್ಚಿನ 350 400 ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ಮಂಜುನಾಥ ಹಿರೇಮಠ ಚೋರನೂರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಸಂಸ್ಥಾಪಕರು ಅಧ್ಯಕ್ಷರು ಬಣಕಾರ್ ಮೂಗಪ್ಪ ತಿಳಿಸಿದರು ಈ ಕಾರ್ಯಕ್ರಮದ ಅಂಗವಾಗಿ ಎನ್ಟಿ ಶ್ರೀನಿವಾಸ್ ಇವರನ್ನು ಉದ್ಘಾಟನೆ ಆಹ್ವಾನ ನೀಡಲಾಗಿತ್ತು ಶಾಸಕರು ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು ಹಾಗಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಾದ ಕಾರಣ ಕೂಡ್ಲಿಗಿ ವೀರನಗೌಡರು ಮನೆಯಲ್ಲಿ ನಮ್ಮ ಕಲಾಭಾರತಿ ಕಲಾ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ವೀರನ ಗೌಡ್ರು ವೀರಶೈವ ಮಹಾಸಭಾ ಅಧ್ಯಕ್ಷರಾದ ಸುನಿಲ್ ಗೌಡ್ರು ತಾಲೂಕು ಘಟಕ ಕೂಡ್ಲಿಗಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಸುರೇಶ್ ರಾಘವೇಂದ್ರ ಪಟ್ಟಣ ಪಂಚಾಯಿತಿ ಸದಸ್ಯರು ಅಸಂಘಟಿತ ತಾಲೂಕು ಅಧ್ಯಕ್ಷರಾದ ಎಂ ಚಂದ್ರಪ್ಪ ಬಿ ರಾಘವೇಂದ್ರ ರಂಗಭೂಮಿ ಕಲಾವಿದರು ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ವಿವೇಕಾನಂದ ಸ್ವಾಮಿ ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಮುಖಾಂತರ ವೇದಿಕೆಯನ್ನು ನೀಡಲು ನಾವು ಬದ್ಧರಿದ್ದೇವೆ, ಕಲಾವಿದರಿಗೆ ಯಾವುದೇ ರೀತಿ ಅನ್ಯಾಯ ಆಗದೆ ನಮ್ಮ ತಾಲೂಕಿಗೆ ಅತಿ ಹೆಚ್ಚು ಕಲಾವಿದರು ಇರುವುದರಿಂದ ಗೌರವಪೂರ್ವಕವಾಗಿ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಹಕರಿಸುತ್ತೇನೆ ಎಂದು ತಿಳಿಸಿದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030