ಬಣವಿಕಲ್ಲು:ಆರ್ ಕೆ ಎಸ್ ಕೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ- ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಶ್ರೀ ಶರಣ ಬಸವೇಶ್ವರ ಪ್ರೌಢಶಾಲೆಯಲ್ಲಿ , ಹದಿ ಹರಿಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ ಪ್ರಯುಕ್ತ. ಹದಿ ಹರಿಯದವರ ಆರೋಗ್ಯದ ಸಮಸ್ಯೆ, ಬಾಲ್ಯ ವಿವಾಹಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಕುರಿತು. ಆರೋಗ್ಯ ಇಲಾಖೆ ಆರ್.ಕೆ.ಎಸ್.ಕೆ ಜಿಲ್ಲಾ ಹಾಗೂ ತಾಲೂಕು ಘಟಕ ವತಿಯಿಂದ. ಕಿಶೋರಿಯರ ಅರೋಗ್ಯ ಸಮಸ್ಯೆಗಳ ಪರಿಹಾರ, ಮತ್ತು ಸ್ಚಾಸ್ತ್ಯ ಜಾಗ್ರತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಿಶೋರಿಯರಲ್ಲಿ ರಕ್ತ ಹೀನತೆ, ಋತುಚಕ್ರ ಸಂಬಂಧಿ ಸಮಸ್ಯೆಗಳು ಹಾಗೂ ಪೌಷ್ಟಿಕ ಆಹಾರದ ಮಹತ್ವದ ಕುರಿತು ತಿಳಿ ಹೇಳಲಾಯಿತು. ವೈಯ್ಯಕ್ತಿ ಶುಚಿ ಮತ್ತು ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು. ಫ್ಲೋರೋಸಿಸ್ ಹಾಗೂ ದಂತ ತಪಾಸಣೆ ಚಿಕಿತ್ಸೆ ಜರುಗಿಸಲಾಯಿತು, ಕಿಶೋರಿಯರ ಸಮಸ್ಯೆಗಳನ್ನು ಆಲಿಸುವ ಪರಿಹಾರ ಸೂಚಿಸುವ, ಆಪ್ತಸಮಾಲೋಚನೆ ಕಾರ್ಯಕ್ರಮ ಹಮ್ಮಿಗೊಳ್ಳಲಾಗಿತ್ತು. ದಂತ ವೈದ್ಯಾಧಿಕಾರಿ ಆನಂದ, ಸಹದೇವ್, ಎಸ್ಎಂ ಮರಳು ಸಿದ್ದಯ್ಯ, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು. ಆರ್.ಕೆ.ಎಸ್.ಕೆ. ಆಪ್ತ ಸಮಾಲೋಚಕ ಓಬಣ್ಣ, ಅಧಿಕಾರಿಗಳಾದ ಯುವರಾಜ್. ರೇಣುಕಾ, ಯಾಶ್ಮೀನ್, ಜನಪ್ರತಿನಿಧಿಗಳಾದ ಆರ್.ವೀರಣ್ಣ, ಪೂರ್ಣಿಮಾ ಪ್ರಶಾಂತ್ ಕುಮಾರ್. ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು. ಹದಿ ಹರೆಯದ ಕಿಶೋರರು ಕಿಶೋರಿಯರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು..
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030