ಸಹಾಯಕ ನಿರ್ದೇಶಕರು ಶ್ರೀ ಸುನಿಲ್ ಅವರಿಗೆ ಬೀಳ್ಕೊಡುಗೆ ವಾಮದೇವ್ ಇವರನ್ನು ಬರಮಾಡಿಕೊಂಡ ಕೃಷಿಕ ಸಮಾಜ ಮತ್ತು ಇಲಾಖೆ ಅಧಿಕಾರಿಗಳು…!!!!

Listen to this article

ದಿನಾಂಕ 22/7/24 ರಂದು ಶ್ರೀ ಸುನಿಲ್ ಅವರು ವರ್ಗಾವಣೆ ಆದ ಪ್ರಯುಕ್ತ ಕೃಷಿ ಇಲಾಖೆ ಆವರಣದಲ್ಲಿ ಅವರನ್ನು ಬೀಳ್ಕೊಡುಗೆ ಮಾಡಿದರು ಇದೆ ಸಂದರ್ಭದಲ್ಲಿ ಮಾತಾಡಿ ನಾನು 2 ವರ್ಷ ಗಳು ಕೂಡ್ಲಿಗಿ ತಾಲೂಕಿನಲ್ಲಿ ಉತ್ತಮ ಆಡಳಿತ. ರೈತರಿಗೆ ಉತ್ತಮ ಮಾಹಿತಿಯನ್ನು ಮತ್ತು ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಸಹಕಾರ ಪ್ರೋತ್ಸಾಹ ಮತ್ತು ನನ್ನ ಜೊತೆಗೆ ಕ್ಯೆ ಜೋಡಿಸಿ ಉತ್ತಮ ಕೆಲಸ ಮಾಡಲು ಸಹಕಾರ ಮಾಡಿದ ಇಲಾಖೆ ಯ ಎಲ್ಲಾ ಅಧಿಕಾರಿ ವರ್ಗ ಮತ್ತು ಕೃಷಿಕ ಸಮಾಜದ ಎಲ್ಲಾ ಆಡಳಿತ ಮಂಡಳಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು ಅದಕ್ಕಿಂತ ಹೆಚ್ಚಾಗಿ ನಮ್ಮ ಶಾಸಕರ ಸಹಕಾರ ನನಗೆ ಅತ್ಯಂತ ತೃಪ್ತಿ ತಂದಿದೆ ಎಂದರು ನಂತರ ವಾಮದೇವ್ ಅವರು ಮಾತನಾಡಿ ನಾನು ಈ ಹಿಂದೆ ಇಲ್ಲಿ ಕೆಲಸ ಮಾಡಿರುವುದರಿಂದ ನನಗೆ ಎಲ್ಲಾರು ಉತ್ತಮ ಸಹಕಾರ ಹಿಂದೆಯೂ ಕೊಟ್ಟಿದ್ದರು ಈಗಲೂ ಕೂಡ ಅದಕ್ಕಿಂತ ಹೆಚ್ಚು ಸಹಕಾರ ಕೊಡುತ್ತಾರೆ ಎಂದು ನಂಬಿಕೆ ಇದೆ ಕೂಡ್ಲಿಗಿ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆ ಬಂದಿದ್ದು ಬೀಜ ಗೊಬ್ಬರಕ್ಕೆ ಯಾವುದೇ ತೊಂದರೆ ಆಗದಂತೆ ಸುನಿಲ್ ಅವರು ಕಾರ್ಯ ನಿರ್ವಸಿದ್ದು ಮುಂದೆ ಯಾವುದೇ ರೀತಿ ರೈತರಿಗೆ ತೊಂದರೆ ಆಗದಂತೆ ನಾನು ಕಾರ್ಯವನ್ನು ನಿರ್ವಸುತ್ತೇನೆ ಮತ್ತು ನನ್ನ ಜೊತೆಗೆ ಕೃಷಿಕ ಸಮಾಜ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಮತ್ತು ಇಲಾಖೆ ಅಧಿಕಾರಿಗಳು ಸ್ಪಂದಿಸುವ ಮೂಲಕ ಹೆಚ್ಚಿನ ಕೆಲಸ ಮಾಡಲು ಸಹಕಾರಿ ಯಾಗುತ್ತೆ ಎಂದು ಹೇಳಿದರು ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷರು ಅದ ನಂದಿ ಜಂಬಣ್ಣ ಮತ್ತು ಇಲಾಖೆ ಆತ್ಮ ಯೋಜನೆ ಯ ಶ್ರವಣ್ ಕುಮಾರ್ ನೀಲಾನಾಯ್ಕ್ ಸಾವಿತ್ರ ಹರಾಳ್ ಚ್ಯತ್ರ ಸಂಭೋಜಿ ಮಲ್ಲಿಕಾರ್ಜುನ ಇನ್ನು ಅನೇಕ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend