ಭಾವೈಕ್ಯತೆಯ ಸಂಕೇತ ಹಿರೇಕುಂಬಳಗುಂಟೆ ಮೊಹರಂ.
ಒಂದಿಷ್ಟು ಭಕ್ತಿ ಜೀವಂತ ಇದೆ, ಒಂದಿಷ್ಟು ಆಚರಣೆಗಳು ಇದೆ ದುಷ್ಚಟಗಳು ಇವೆ ಒಂದಿಷ್ಟು ಮೋಜು ಮಸ್ತಿ ಇದೆ, ಒಂದಿಷ್ಟು ಜನಪದದ ಕಲೆ, ಅಳ್ಳಳ್ಲಿಯ ಕುಣಿತ ವಿಷೇಶವಾಗಿ ಇದೆ ನೃತ್ಯ, ಹಾಡು (ಸವಾಲಿನ ಪದ) ಆಟ, ಕುಣಿತ, ಅಲಾವಿ ಕುಣಿತ ಇನ್ನೂ ಅನೇಕ ರೀತಿಯಿಂದ ಹಿರೇಕುಂಬಳಗುಂಟೆಯಲ್ಲಿ ಮೊಹರಂ ಹಬ್ಬ ಆಚರಿಸಲಾಗುತ್ತದೆ.
ಹಿರೇಕುಂಬಳಗುಂಟೆಯ ಸರ್ವ ಜನಾಂಗೀಯ ಜನರು ಸೇರಿ ಸಂತೋಷವಾಗಿ ಆನಂದವಾಗಿ ಪರಸ್ಪರ ಸಹೋದರತ್ವ ದಿಂದ ಆಚರಿಸುವಂತಹ ಬಾವೈಕ್ಯ ಹಬ್ಬ. ಮೊಹರಂ ಈ ಹಬ್ಬದಲ್ಲಿ ಪೀರಲ ದೇವರಿಗೆ ಹಿರೇಕುಂಬಳಗುಂಟೆ ಹಾಗು ಸುತ್ತ ಮುತ್ತಿಲಿನ ಹಳ್ಳಿ ಗಳಿಂದ ಅಲಾಯಿ ಕುಣಿ ಗೆ ಮರದ ಕಟ್ಟಿಗೆ ಟ್ರಾಕ್ಟರ್ ಮುಲಕ ತಂದು ಹಾಕಿ ಹರಕೆ ಸಲ್ಲಿಸುತ್ತಾರೆ ಹಾಗು
ತೂಕದ ಸಕ್ರಿ ಕೊಡಿಸುವುದು, ಕುದುರೆ 🐎 ಹುಲಿ 🐅 ಹಸ್ತ, ಬೆಲ್ಲದ ತೂಕ ತೊಟ್ಟಿಲು , ಹೂ, ಪಾನಕ ಒಪ್ಪಿಸುವುದು ಇನ್ನು ಅನೇಕ ರೀತಿಯ ಹರಕೆಗಳನ್ನು ತೀರಿಸುತ್ತಾರೆ..ಈ ಮೊಹರಂ ಹಬ್ಬದಲ್ಲಿ ಪೀರಲ ದೇವರು ಬೆಳಗಿನ ಜಾವ ಸರಿ ಸುಮಾರು AM 3 ಗಂಟೆಗೆ ಕೆಂಡ ಹಾಯುವುದು ( ತುಳಿಯುವುದು) ನ್ನ ನೋಡಲು ಜನಸಾಮಾನ್ಯರು ಕಾದು ಕುಳಿತಿರುತ್ತಾರೆ ಮತ್ತು ಮರು ದಿನ ಬೆಳಗ್ಗೆ 3 ಗಂಟೆಗೆ ಅಲಾವಿಯ ಬೆಂಕಿಗೆ ಉಪ್ಪು ಹುರುಳಿ ಕಾಳು ಕೂಡಾ ಹಾಕುವ ಪದ್ದತಿಯು ಕುಡಾ ಇದೆ ಈ ಎಲ್ಲ ಕಾರ್ಯವೈಕರಿಗಳನ್ನ ಹಿರೇಕುಂಬಳಗುಂಟೆ ಸರ್ವ ಜನರು ಬಾವೈಕ್ಯ ವಾಗಿ ಹಾಚರಿಸುವ ಆಚರಣೆ ಅತಿ ವಿಸ್ಮಯ ಹಾಗು ಅದ್ಭುತದ ಕ್ಷಣಗಳು ನಿಜಕ್ಕು ಜೀವಂತ
ಈ ರೀತಿಯ ಭಾವೈಕ್ಯತೆಗೆ ಮೂಕ ವಿಸ್ಮಿತರಾಗದೆ ಇರೋದಕ್ಕೆ ಸಾಧ್ಯವಿಲ್ಲ…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030