ಸರಕಾರಿ ಶಾಲೆಗಳಿಗೆ ದಾನಿಗಳು ದೇಣಿಗೆ ನೀಡಿದರೆ ಕನ್ನಡ ಶಾಲೆ ಬೆಳೆಯುತ್ತವೆ ಎನ್ ಗಂಗಮ್ಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 4ನೇ ವಾರ್ಡ್ ಶಾಲೆಯಲ್ಲಿ ಸಿಬಿ ಸತ್ಯಮ್ಮ ನಿವೃತ ಶಿಕ್ಷಕರು ಇವರ ಸ್ಮರಣಾರ್ಥ ಅಂಗವಾಗಿ ಹಾಗೂ ಸತ್ಯಮ್ಮನವರ ಮೊಮ್ಮಗಳಾದ ರಕ್ಷಿತ ಇವರ ಹುಟ್ಟು ಹಬ್ಬದ ಪ್ರಯುಕ್ತ ಸಿಬಿ ಸತ್ಯಮ್ಮ ಇವರ ಮಗನಾದ ಸಿಬಿ ಸಿದ್ದೇಶ್ ಮಂಜುಳಾ ಹುಟ್ಟುಹಬ್ಬ ಹಾಗೂ ಸ್ಮರಣಾರ್ಥ ಅಂಗವಾಗಿ ಮಕ್ಕಳಿಗೆ ನೋಟ್ ಪುಸ್ತಕ ಪೆನ್ನು ದೇಣಿಗೆ ನೀಡಿದರು ಈ ಸಂದರ್ಭದಲ್ಲಿ ಎನ್ ಗಂಗಮ್ಮ ಮುಖ್ಯೋಪಾಧ್ಯಾಯರು ಮಾತನಾಡಿ ಕನ್ನಡ ಶಾಲೆಗಳಿಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸ ಪೋಷಕರು ಸಾಕಷ್ಟು ಗಮನಹರಿಸಬೇಕು ಹಾಗೂ ಇಂತಹ ದಾನಿಗಳು ಶಾಲೆಗೆ ಭೇಟಿ ನೀಡಿ ಹುಟ್ಟುಹಬ್ಬ ಆಚರಿಸುವ ಈಗಿನ ಪೀಳಿಗೆಯಲ್ಲಿ ಸಾಕಷ್ಟು ದುಡ್ಡು ವ್ಯಯ ಮಾಡುತ್ತಾರೆ ಹಾಗಾಗಿ ಇಂಥ ಕನ್ನಡ ಶಾಲೆಗಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ದೇಣಿಗೆ ನೀಡಿದರೆ ಕನ್ನಡ ಶಾಲೆ ಉಳಿಯುತ್ತವೆ ಬೆಳೆಯುತ್ತವೆ ಎಂದು ಮಾತನಾಡಿದರು ಹಾಗೂ ಸಿಬಿ ಸಿದ್ದೇಶ್ ಇವರು ಸಹ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ನಿಮ್ಮ ಭವಿಷ್ಯ ಕಂಡುಕೊಳ್ಳಿ. ಹಾಗೂ ನಮ್ಮ ತಾಯಿಯಾದ ಸತ್ಯಮ್ಮ ಇವರು ಇದೇ ಶಾಲೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ ಹಾಗೂ ಅವರ ನೆನಪಿಗಾಗಿ ಈ ಒಂದು ಕೊಡುಗೆ ಕೊಟ್ಟಿರುತ್ತೇವೆ ನಾವು ಕೊಡುಗೆ ಕೊಡುವುದು ದೊಡ್ಡ ಮಾತಲ್ಲ ಮಕ್ಕಳು ನಿಮ್ಮ ಭವಿಷ್ಯವನ್ನು ನಿರೂಪಿಸಿಕೊಳ್ಳಿ ಎಂದು ಮಕ್ಕಳಿಗೆ ತಿಳಿಸುತ್ತಾ ವಿದ್ಯೆ ಇಲ್ಲದವನು ಹದ್ದಿಗಿಂತ ಕಡೆ ಎಂದು ನುಡಿದರು ಹಾಗೂ ಇವತ್ತಿನ ಸಂದರ್ಭದಲ್ಲಿ ನಮ್ಮ ಸೊಸೆಯಾದ ರಕ್ಷಿತಾ ಇವರದು ಹುಟ್ಟುಹಬ್ಬವಿರುತ್ತದೆ ಹಾಗಾಗಿ ನಮ್ಮ ಕುಟುಂಬದಿಂದ ನಾವು ಪೆನ್ನು ಪುಸ್ತಕ ಮಕ್ಕಳಿಗೆ ನೀಡುತ್ತೇವೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಸಿಬಿ ಸತ್ಯಮ್ಮ ನಿವೃತ್ತಿ ಶಿಕ್ಷಕರು ಇವರ ಕುಟುಂಬ ಸಿಬಿ ಸಿದ್ದೇಶ್ ಮಂಜುಳಾ ಹಾಗೂ ಮಕ್ಕಳು ಹಾಗೂ ಸಿ ಆರ್ ಪಿ ಶೇಖರಪ್ಪ ಎನ್ ಗಂಗಮ್ಮ ಮುಖ್ಯೋಪಾಧ್ಯಾಯರು ಟಿ ರವಿಚಂದ್ರನ್ ಸಹ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಅಡಿಗೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು…
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030