ಮೀನುಗಾರರ ಬೇಡಿಕೆಗಳಿಗೆ ಸ್ಪಂದನೆ ; ವಸತಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ತಿಳಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಗುಡೇಕೋಟೆ ಹೋಬಳಿಯ ಶ್ರೀ ಅಂಜಿನೇಯ ಮೀನುಗಾರರ ಸಂಘ( 286 ), ಕಾನಾಹೊಸಹಳ್ಳಿ ಹೋಬಳಿಯ ಮೀನುಗಾರರ ಸಹಕಾರ ಸಂಘ( 250)ಗಳಿಗೆ ಮೀನುಗಾರಿಕೆ ಇಲಾಖೆಯಿಂದ ಮೀನುಗಾರರಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್.ಎನ್.ಟಿ. ಅವರು ದಿ. 02-07-24 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಿಟ್ ಗಳನ್ನು ವಿತರಿಸಿದರು. ಮೀನುಗಾರರು, ಸರ್ಕಾರದಿಂದ ಹೆಚ್ಚಿನ ಸಲಕರಣೆಗಳು ಮತ್ತು ಅರಿಗೋಲು, ವಸತಿ ವ್ಯವಸ್ಥೆಯನ್ನು ಒದಗಿಸಿಕೊಡಬೇಕು ಎಂಬ ಮನವಿಯನ್ನು ಆಲಿಸಿದ ಶಾಸಕರು ನಮ್ಮ ಕೂಡ್ಲಿಗಿ ಕ್ಷೇತ್ರದ ಮೀನುಗಾರರ ಅಭಿವೃದ್ಧಿಗೆ ಒತ್ತುಕೊಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮೀನುಗಾರಿಕೆಯ ಸಹಾಯಕ ನಿರ್ದೇಶಕರಾದ ಮಂಜುನಾಥ ಕೆ. ಎನ್, ಸಹಾಯಕರು ಮಲ್ಲನಾಯಕ. ಎಸ್, ಕಾರ್ಯದರ್ಶಿ ಚೆನ್ನಪ್ಪ ಮತ್ತು ಅಂಜಿನಪ ಅವರು, ಮೀನುಗಾರರಾದ ಕಾಕಿ ಬಸಣ್ಣ, ಮುತ್ತೇಪ್ಪ, ಬಾಬಣ್ಣ, ವೀರಭದ್ರಪ್ಪ, ಗಂಗಾಧರ, ಹೊನ್ನೂರು ಸ್ವಾಮಿ ಅವರು ಉಪಸ್ಥಿತರಿದ್ದರು….
ವರದಿ. ಎಂ. ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030