ಸಕಲ ಜೀವಿಗಳು ಬದುಕಲು ಇರುವ ಏಕೈಕ ಭೂಮಿಯನ್ನು ರಕ್ಷಿಸೋಣ :ಡಾ. ಶ್ರೀನಿವಾಸ್ .N .T
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ .N.T ರವರು ದಿನಾಂಕ 2.07.2024 ರಂದು ಎಂ.ಬಿ. ಅಯ್ಯನಹಳ್ಳಿ ಗ್ರಾಮದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,
ಗಿಡಮರಗಳು ಇಂಗಾಲವನ್ನು ಸೇವಿಸಿ, ತಮಗೆ ಸ್ವಚ್ಛ ಆಮ್ಲಜನಕವನ್ನು ನೀಡುವ ಗಿಡ ,ಮರ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಹಸಿರು ಇದ್ದರೆ ಉಸಿರು, ಕಾಡು ಇದ್ದರೆ ನಾಡು ಎನ್ನುವಂತೆ. ನನ್ನ ಗಿಡ, ನನ್ನ ಹೆಮ್ಮೆ ವೃಕ್ಷಾಂದೋಲನದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಇಂದು ನಾನು ನೆಟ್ಟ ಈ ಸಸಿ ಬೆಳೆದು ದೊಡ್ಡ ಮರವಾಗಿ ನೋಡಲು ಇಚ್ಚಿಸುತ್ತೇನೆ. ನಮ್ಮ ಕರ್ನಾಟಕ ಸರ್ಕಾರ ಹಸಿರುದಿಕೆಯನ್ನು ಶೇ 33ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮಾಡಿರುವ ಸಂಕಲ್ಪಕ್ಕೆ ಅನುಗುಣವಾಗಿ ವನಮಹೋತ್ಸವ ಆಂದೋಲನವನ್ನು ಆಯೋಜಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ವರ್ಗ, ಗ್ರಾ.ಪಂ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, & ಸುತ್ತಮುತ್ತಲಿನ ಗ್ರಾಮದ ಮುಖಂಡರುಗಳು ಹಾಗೂ ಉಪಸ್ಥಿತರಿದ್ದರು…
ವರದಿ. ಎಂ, ಬಸವರಾಜ್, ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030